‘ಹೆದ್ದಾರಿಯಲ್ಲಿ ಸಾಗುವ ಹೆಚ್ಚಿನ ಲಾರಿಗಳು ಬಲಭಾಗದಲ್ಲಿ ಸಂಚರಿಸುತ್ತವೆ. ಇದರಿಂದ, ಅವುಗಳನ್ನು ಹಿಂದೆ ಹಾಕಿ ಮುಂದೆ ಹೋಗಲು ಅನಿವಾರ್ಯವಾಗಿ ಎಡಗಡೆಯಿಂದ ಮುನ್ನುಗ್ಗಬೇಕಾಗುತ್ತದೆ. ಇಂತಹ ಕಾರಣದಿಂದ ಅಪಘಾತ ಆಗುತ್ತದೆ’ ಎಂದು ಡಾ. ಈಶ್ವರ ಶಾಸ್ತ್ರಿ ಮೋಟಿನಸರ ಹೇಳಿದ್ದಾರೆ (ವಾ.ವಾ., ಫೆ. 19). ಆದರೆ ಹೆದ್ದಾರಿಯಲ್ಲಿ ವಾಹನಗಳು ರಸ್ತೆಯ ಎಡಭಾಗದಲ್ಲಿ ಪಾದಚಾರಿಗಳು ಹಾಗೂ ದ್ವಿಚಕ್ರವಾಹನಗಳಿಗೆ ಜಾಗ ಬಿಟ್ಟುಕೊಟ್ಟು ಬಲಭಾಗದಲ್ಲಿ ಸಂಚರಿಸುತ್ತವೆ. ಇದು ದ್ವಿಚಕ್ರವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸುರಕ್ಷಿತ ಕೂಡ. ಆದರೆ ಲಾರಿಯನ್ನು ಹಿಂದಿಕ್ಕುವವರು ತಾಳ್ಮೆಯಿಂದ ಎಡಕ್ಕೆ ಬಂದು, ಅಲ್ಲಿ ಪಾದಚಾರಿಗಳಾಗಲೀ ವಾಹನಗಳಾಗಲೀ ಇಲ್ಲ ಎಂಬುದನ್ನು ಖಾತರಿಪಡಿಸಿಕೊಂಡು ಓವರ್ಟೇಕ್ ಮಾಡಿದರೆ ಯಾವ ಅಪಘಾತವೂ ಆಗುವುದಿಲ್ಲ. ಆದರೆ ಮೋಜು ಮಸ್ತಿ ಮಾಡುವ ಯುವಜನಾಂಗದಿಂದ ಇಂತಹ ತಾಳ್ಮೆಯನ್ನು ನಿರೀಕ್ಷಿಸುವಂತಿಲ್ಲ.