ನೀರು ಜೀವ ಸಂಕುಲಕ್ಕೆ ಸಂಜೀವಿನಿ. ನೀರಿಲ್ಲದೆ ಬದುಕು ಊಹಿಸಲು ಅಸಾಧ್ಯ. ಆದರೆ ನಮ್ಮ ರಾಜಕೀಯ ನಾಯಕರಿಗೆ ಪ್ರತೀ ವಿಧಾನಸಭೆ, ಲೋಕಸಭಾ ಚುನಾವಣೆ ಬಂದಾಗ ಮಾತ್ರ ನೀರಿನ ಹೋರಾಟದ ನೆನಪಾಗುತ್ತದೆ. ನೀರಿನ ಹೆಸರಿನಲ್ಲಿ ರಾಜಕೀಯ ಮಾಡಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಾರೆ. ನಂತರ ಆ ಭರವಸೆಗಳನ್ನು ಮರೆತು ಬಿಡುತ್ತಾರೆ. ಉದಾಹರಣೆಗೆ, ಕೃಷ್ಣಾ, ಕಾವೇರಿ, ಎತ್ತಿನಹೊಳೆ, ವಾರಾಹಿ, ಭದ್ರಾ ಮೇಲ್ದಂಡೆ, ಮಹದಾಯಿ, ಮೇಕೆದಾಟು ಯೋಜನೆಗಳಲ್ಲಿ ಇಂತಹ ನಡೆ ಕಂಡುಬಂದಿರುವುದು ಇತಿಹಾಸದಿಂದ ತಿಳಿಯುತ್ತದೆ. ಎಲ್ಲಾ ಯೋಜನೆಗಳ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತವೆ. ಎಲ್ಲಾ ಪಕ್ಷಗಳಿಗೆ ಅಧಿಕಾರಕ್ಕೆ ಬರಲು ರೈತ, ಕೃಷಿ, ನೀರಾವರಿ, ಕಾಲುವೆ, ಅಣೆಕಟ್ಟು ಯೋಜನೆಗಳೇ ಮೆಟ್ಟಿಲು. ಚುನಾವಣೆ ಮುಗಿದ ಮೇಲೆ ಈ ಭರವಸೆಗಳಿಗೆ ಎಳ್ಳುನೀರು.