ಈಗ ಎಲ್ಲೆಡೆ ಭರಪೂರ ಮಳೆಯಿಂದಾಗಿ ಹಳ್ಳ, ಕೆರೆ, ಚೆಕ್ ಡ್ಯಾಂಗಳು ತುಂಬಿ ಅನ್ನದಾತನ ಮೊಗದಲ್ಲಿ ಮಂದಹಾಸ ಕಾಣುತ್ತಿದೆ. ಆದರೂ ನಾಡಿನಾದ್ಯಂತ ಕೋವಿಡ್ನ ಆರ್ಭಟದಲ್ಲಿ ಆತಂಕದ ಸ್ಥಿತಿ ಉಂಟಾಗಿದೆ. ಆದರೆ, ಭರ್ತಿಯಾದ ಹಳ್ಳ, ಕೆರೆ, ಚೆಕ್ ಡ್ಯಾಂಗಳಿಗೆ ಬಾಗಿನ ಅರ್ಪಿಸಲು ಜನಪ್ರತಿನಿಧಿಗಳು ಜನಸಾಮಾನ್ಯರ ಒಡಗೂಡಿ ಮುಂದಾಗುತ್ತಿದ್ದಾರೆ. ಕೊರೊನಾ ಸೋಂಕಿನ ಈ ಸಮಯದಲ್ಲಿ ಬಾಗಿನ ಅರ್ಪಿಸುವ ಸಂಭ್ರಮ ಬೇಕೇ?