ಬದಲಾದ ಕಾಲಮಾನದಲ್ಲಿ ಜಾನಪದ ಲೋಕವು ಕಲಾಪ್ರತಿಮೆಗಳ ನಿರ್ಮಾಣ, ವಸ್ತುಸಂಗ್ರಹಾಲಯಗಳು, ಪ್ರತಿ ಭಾನುವಾರದ ಕಲಾ ಪ್ರದರ್ಶನಗಳನ್ನೂ ಒಳಗೊಂಡು ಈಗ ಮತ್ತಷ್ಟು ವಿಸ್ತಾರಗೊಂಡಿದೆ. ಹೀಗಿರುವಾಗ ಜಾನಪದ ಲೋಕದ ನಿರ್ವಹಣೆ, ಸಿಬ್ಬಂದಿ ವ್ಯವಸ್ಥೆ ಅತ್ಯಗತ್ಯ. ಕೇಂದ್ರದ ಹಸಿರು ಪರಿಸರವನ್ನು ಉಳಿಸಿಕೊಳ್ಳುವ ಕಾರ್ಯ ಶ್ರಮದಾಯಕವೂ ಆಗಿದೆ. ಹಾಗಾಗಿ ಅನಿವಾರ್ಯವಾಗಿ ಹಿರಿಯರು ಮತ್ತು ಮಕ್ಕಳ ಪ್ರವೇಶ ಶುಲ್ಕವನ್ನು ಸ್ಪಲ್ಪಮಟ್ಟಿಗೆ ಏರಿಸಲಾಗಿದೆ. ಆದರೆ, ಶೈಕ್ಷಣಿಕ ಪ್ರವಾಸಕ್ಕೆ ಬರುವ ಮಕ್ಕಳಿಗೆ ಪ್ರವೇಶ ಶುಲ್ಕದಲ್ಲಿ ರಿಯಾಯಿತಿಯೂ ಇದೆ. ಅಭಿವೃದ್ಧಿಯತ್ತ ಸಾಗುತ್ತಿರುವ, ಕಲೆ– ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವ ಜಾನಪದ ಲೋಕದ ಬೆಳವಣಿಗೆಗೆಎಲ್ಲರೂ ಸಹಕರಿಸಬೇಕು.