ಸರ್ಕಾರಗಳು ನೀಡುವ ಸಬ್ಸಿಡಿ ಹಾಗೂ ಉಚಿತ ಕೊಡುಗೆಗಳು ಸಂದರ್ಭೋಚಿತವಾಗಿ ಇರಬೇಕು’ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ (ಪ್ರ.ವಾ., ಡಿ. 22). ಸಂದರ್ಭೋಚಿತ ಎಂದರೆ ಚುನಾವಣಾ ಸಂದರ್ಭ ಎಂದು ಭಾವಿಸಬೇಕೇ? ಮತದಾರರನ್ನು ಸೆಳೆಯುವ ಮಾರ್ಗಗಳಲ್ಲಿಇಂತಹ ಉಚಿತ ಕೊಡುಗೆಗಳು ಒಂದು. ಉಚಿತ ಮತ್ತು ಸಬ್ಸಿಡಿ ಸವಲತ್ತುಗಳು ಅರ್ಹರಿಗೆ ತಲುಪುವುದೇ ಇಲ್ಲ. ಬಹುತೇಕವು ಸಂಸದರು, ಶಾಸಕರು ಅಥವಾ ಇನ್ನಾವುದೋ ಜನಪ್ರತಿನಿಧಿಗಳ ಹಿಂಬಾಲಕರಿಗೇ
ದೊರುಕುವುದು.