‘ಹಿಂದಿನ ಸರ್ಕಾರದ ಮುಖಂಡರ ಅಸಲಿ ಬಣ್ಣ ಬಯಲು ಮಾಡುವೆ’, ‘ಇವರ ಜಾತಕ ಬಿಚ್ಚಿಡುವೆ’ ಎಂಬೆಲ್ಲ ಪೌರುಷದ ಮಾತುಗಳನ್ನು ನಮ್ಮ ರಾಜಕೀಯ ನಾಯಕರು ಆಗಾಗ ಹೇಳುವುದನ್ನು ಕೇಳುತ್ತಲೇ ಇರುತ್ತೇವೆ. ಅಧಿಕಾರದ ರುಚಿ ಸವಿಯುತ್ತಿರುವಾಗ ಎಲ್ಲವೂ ಚಂದವಾಗಿಯೇ ಕಾಣಿಸುತ್ತಿರುತ್ತವೆ. ಕೈಯಲ್ಲಿ ಮಾಡಲು ಕೆಲಸವಿಲ್ಲದಾಗ ಈ ರೀತಿಯಲ್ಲಿ ಸುದ್ದಿಯಲ್ಲಿರಲು ಪ್ರಯತ್ನಿಸುವುದು ಹೊಸದೇನಲ್ಲ. ಇಂತಹ ನಡೆ ಸಲ್ಲದು.