ದೇಶದ ಸುತ್ತ ಶತ್ರುಗಳಿದ್ದು, ಭದ್ರತೆ ಪ್ರಾಮುಖ್ಯ ಪಡೆದಿದೆ. ದೇಶ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರಂತಹ ಬಲಿಷ್ಠ ನಾಯಕರು ಬೇಕಿದೆ ಎಂದು ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ. ಅವರ ಅಭಿಪ್ರಾಯ ಸರಿಯಾಗಿದೆ.ಭಾರತದ ಬೆಳವಣಿಗೆಯನ್ನು ಕಂಡು ಕೆಲವು ದೇಶಗಳು ಕರುಬುತ್ತಿವೆ. ಇಲ್ಲಿ ಅಸ್ಥಿರತೆ ಸೃಷ್ಟಿಸಲು ಹಾತೊರೆಯುತ್ತಿವೆ. ಅಂತಹ ಪ್ರಯತ್ನಗಳನ್ನು ಎದುರಿಸಲು ದಿಟ್ಟ ನಾಯಕತ್ವ ಬೇಕು.ಹೊಸ ಕನಸುಗಳೊಂದಿಗೆ ಬಲಿಷ್ಠ ಭಾರತ ಕಟ್ಟಬೇಕಿದೆ. ಇದಕ್ಕೆ ಸಮರ್ಥ ನಾಯಕನ ಅವಶ್ಯಕತೆ ಇದೆ.