ಧರ್ಮವು ವೈಯಕ್ತಿಕವಾದುದು. ಜಾತ್ರೆ ಹಾಗೂ ವಿಶೇಷ ದಿನಗಳಲ್ಲಿ ದೇವರ ರಥೋತ್ಸವಗಳನ್ನು ಸಾಮೂಹಿಕವಾಗಿ ನಡೆಸಿದರೂ ಅದರಲ್ಲಿ ಭಾಗವಹಿಸಬೇಕೇ ಬೇಡವೇ ಎಂಬ ನಿರ್ಣಯ ಆಗುವುದು ವೈಯಕ್ತಿಕ ನೆಲೆಯಲ್ಲಿ. ಎಲ್ಲರೂ ಭಾಗವಹಿಸಲೇಬೇಕು ಎಂಬ ಒತ್ತಾಯ ಸಂವಿಧಾನಪೂರ್ವ ಭಾರತದಲ್ಲೂ ಇರಲಿಲ್ಲ. ಇಂತಹ ಸಹಜ, ಸಾಮಾನ್ಯ ತಿಳಿವಳಿಕೆ ಹಾಗೂ ಸಂವಿಧಾನದ ಆಶಯಗಳನ್ನು ಜನಪ್ರತಿನಿಧಿಗಳೇ ಪಾಲಿಸದೆ, ವೈಯಕ್ತಿಕ ಅಭಿಪ್ರಾಯದ ಮೇರೆಗೆ ಸರ್ಕಾರವನ್ನು ಮುನ್ನಡೆಸುತ್ತೇವೆ ಎನ್ನುವುದು ಸರ್ವಾಧಿಕಾರಿ ಧೋರಣೆಯ ಸಂಕೇತ.