‘ಸುಮಲತಾ ಅವರಿಗೆ ಮಂಗಳಾರತಿ ಮಾಡಿ’ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹೇಳಿದ್ದಾರೆ (ಪ್ರ.ವಾ., ಏ. 13). ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಅವರು, ಒಂದು ಕ್ಷೇತ್ರದಲ್ಲಿ ಗೆದ್ದದ್ದಕ್ಕೆ ವಿಜಯದ ಮಂಗಳಾರತಿ, ಮತ್ತೊಂದು ಕ್ಷೇತ್ರದಲ್ಲಿ ಸೋತದ್ದಕ್ಕೆ ಮುಖಕ್ಕೆ ಮಂಗಳಾರತಿ ಎರಡನ್ನೂ ಮಾಡಿಸಿಕೊಂಡಿದ್ದಾರೆ. ಹೀಗಾಗಿ, ಸುಮಲತಾ ಅವರಿಗೆ ತಾವು ಹೇಳಿದ್ದು ಯಾವ ಬಗೆಯ ಮಂಗಳಾರತಿ ಎಂಬುದನ್ನು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಬೇಕು.