ಈಗಿನ ದಿನಗಳಲ್ಲಿ ವಿಶೇಷವಾಗಿ ಮಧ್ಯಮ ವರ್ಗದ ಜನರು ಸರ್ಕಾರಿ ನೌಕರಿಯ ಮೇಲೆ ಅವಲಂಬಿತರಾಗಿಲ್ಲ. ಆದರೆ ಎಲ್ಲರೂ ಮೀಸಲಾತಿ ಬಯಸುತ್ತಿರುವುದು ಶೈಕ್ಷಣಿಕ ಸೀಟುಗಳಿಗಾಗಿ. ಉತ್ತಮ ಸರ್ಕಾರಿ ಸಂಸ್ಥೆಗಳಲ್ಲಿ ತುಂಬಾ ಸ್ಪರ್ಧೆ ಇದೆ. ಈಗಿರುವ ಶೇ 50ರ ಪರಿಮಿತಿಯನ್ನು ಮೀರಿ ಮೀಸಲಾತಿಯನ್ನು ನೀಡಬೇಕೆಂದು ರಾಜ್ಯ ಸರ್ಕಾರವು ಸುಪ್ರಿಂ ಕೋರ್ಟ್ಗೆ ಮನವಿ ಮಾಡಿದೆ. ಅಂದರೆ ಜನರಲ್ ಕೆಟಗರಿ ಸೀಟುಗಳು ಇನ್ನೂ ಕಡಿಮೆಯಾಗುತ್ತವೆ.