ಬದಲಿಗೆ ಆಸ್ತಿ, ಉದ್ಯೋಗ, ಆರ್ಥಿಕ ಸ್ಥಿತಿಗತಿ ಪರಿಶೀಲಿಸಿ, ವಯಸ್ಸನ್ನು ಬೇರೊಂದುಮಾನದಂಡ ಆಧರಿಸಿ ಕಂಡುಹಿಡಿದಲ್ಲಿ ನಿಜವಾದ ಫಲಾನುಭವಿಗಳಿಗೆ ಆಗುವ ಅನ್ಯಾಯ ತಡೆಯಬಹುದು. ಲಾಕ್ಡೌನ್ ಸಂದರ್ಭದಲ್ಲಿ ವೃದ್ಧರಿಗೆ ಧೈರ್ಯ ತುಂಬಿದ್ದು ವೃದ್ಧಾಪ್ಯ ವೇತನ ಎಂಬುದನ್ನು ಮರೆಯುವಂತಿಲ್ಲ. ಆಧಾರ್ ತಿದ್ದುಪಡಿಗೆ ಸೂಕ್ತವಾದ ವ್ಯವಸ್ಥೆ ಕಲ್ಪಿಸಿ, ಕಾಲಾವಕಾಶ ನೀಡಲಿ. ಆತುರದ ತೀರ್ಮಾನ ತರವಲ್ಲ.