ಸರ್ಕಾರಿ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಎಷ್ಟೇ ಪಾರದರ್ಶಕತೆ, ತಂತ್ರಜ್ಞಾನ ಹಾಗೂ ನೇರ ನೇಮಕಾತಿ ಪ್ರಕ್ರಿಯೆಯನ್ನು ಜಾರಿಗೆ ತರುವ ಪ್ರಯತ್ನಗಳಾಗಿದ್ದರೂ ಮತ್ತೆ ಮತ್ತೆ ವಂಚನೆಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಕೆಲಸದ ಆಮಿಷ ಒಡ್ಡುವ ವಂಚಕರನ್ನು ಪಕ್ಕಕ್ಕಿಟ್ಟರೂ, ಅಡ್ಡದಾರಿಯಿಂದ ಆಯ್ಕೆಯಾಗ ಬಯಸುವ ಅಭ್ಯರ್ಥಿಗಳಿಗೇನೂ ಕೊರತೆಯಿಲ್ಲ. ಇದು ಕೇವಲ ಕೆಎಸ್ಆರ್ಟಿಸಿಗೆ ಸೀಮಿತವಾಗಿಲ್ಲ. ಅನೇಕ ರೀತಿಯ ಸರ್ಕಾರಿ ನೌಕರಿಗಳನ್ನು ಗಿಟ್ಟಿಸಿಕೊಳ್ಳಲು ಸಾಲ ಮಾಡಿಯೋ ಜಮೀನು, ಒಡವೆ, ಆಸ್ತಿ ಮಾರಿಯೋ ಲಂಚ ನೀಡಲು ಮುಂದಾಗುವ ಅಭ್ಯರ್ಥಿಗಳಿದ್ದಾರೆ.