‘ಕಸವರಮೆಂಬುದು ನೆರೆ ಸೈರಿಸಲಾಪರೊಡೆ ಪರ ವಿಚಾರಮುಂ, ಧರ್ಮಮುಮಂ’ ಎಂಬ ಕವಿರಾಜಮಾರ್ಗಕಾರನ ಆಶಯದಂತೆ, ಇಬ್ಬರಿಗೂ ಬೇಕಾಗಿರುವುದು ಇನ್ನೊಬ್ಬರ ವಿಚಾರವನ್ನು ಸಹಿಷ್ಣುಗಳಾಗಿ ಕೇಳಿಸಿಕೊಳ್ಳುವುದಾಗಿದೆ. ಕಾಲಪ್ರವಾಹದಲ್ಲಿ ನೀರು ಸಾಕಷ್ಟುಹರಿದಾಗಿದೆ. ಈರ್ಷ್ಯೆ, ಅಸೂಯೆ ಎಂದಿಗೂ ಉಳಿಯುವುದಿಲ್ಲ. ಶಾಂತಿ, ಸಹಬಾಳ್ವೆ, ವಿಶ್ವಭ್ರಾತೃತ್ವ, ದೇವನೂರರ ‘ಸಂಬಂಜ ಅನ್ನಾದು ದೊಡ್ಡದು ಕನಾ’ ಎಂಬ ಅರಿವು ಇಬ್ಬರಿಗೂ ಬಾಳದೀವಿಗೆಯಾಗಲಿ.