ಕೆಲ ದಿನಗಳ ಹಿಂದೆ ನನ್ನ ಅಕ್ಕ ಸಾವಿತ್ರಿಯ ಪತಿ ರಾಮನಾಥ್ ಅವರು ಸ್ಕೂಟರ್ನಲ್ಲಿ ರಾತ್ರಿ 7.30ರ ಸುಮಾರಿಗೆ ಬೆಂಗಳೂರಿನ ಲಾಲ್ಬಾಗ್ ರಸ್ತೆಯಲ್ಲಿ ಹೋಗುತ್ತಿದ್ದಾಗ, ಸಿಗ್ನಲ್ನಲ್ಲಿ ನಿಯಂತ್ರಣ ಕಳೆದುಕೊಂಡು ತೀವ್ರವಾಗಿ ಗಾಯಗೊಂಡರು. ದಾರಿಯಲ್ಲಿ ಹೋಗುತ್ತಿದ್ದ ವಿಮಲ್ ಶೇಖರ್ ಎಂಬುವರು, ಪ್ರಜ್ಞಾಹೀನರಾಗಿದ್ದ ರಾಮನಾಥ್ ಅವರನ್ನು ಆಟೊದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದರು. ಗಾಯಾಳುವಿನ ಹೆಸರು, ವಿಳಾಸ ತಿಳಿಯದೇ ಇದ್ದುದರಿಂದ ‘unknown’ ಎಂದು ನಮೂದಿಸಿ, ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆಯ ವ್ಯವಸ್ಥೆ ಮಾಡಿ, ಗಾಯಾಳುವಿನ ಜೊತೆ ತಾವೂ ಇದ್ದರು.