ಬದಲಾದ ಕೌಟುಂಬಿಕ ಜೀವನಶೈಲಿಯಿಂದ ಇಂದು ಕುಟುಂಬಗಳು ಒಡೆದು ಛಿದ್ರವಾಗುತ್ತಿವೆ. ಯಶಸ್ಸು ಎಂದರೆ ಕೇವಲ ಐಶ್ವರ್ಯ, ಅಧಿಕಾರ, ಆಡಂಬರದ ಜೀವನಶೈಲಿಯನ್ನು ಪಡೆಯುವುದೆಂದು ಯುವಜನರು ತಿಳಿದಂತಿದೆ ಅಥವಾ ಹೀಗೆ ತಿಳಿಯುವಂತೆ ಸಿನಿಮಾ, ಟಿ.ವಿ., ಮೊಬೈಲ್ಗಳು ಮಾಡುತ್ತಿವೆ. ಹೀಗೆ ಹುಸಿ ಆರಾಮದಾಯಕ ಜೀವನದ ಬಿಸಿಲುಗುದುರೆಯ ಬೆನ್ನುಹತ್ತುವ ನಾವು ತುಸು ನಿಂತು ಯೋಚಿಸಬೇಕಿದೆ. ಹುಚ್ಚು ಭ್ರಮೆಗಳ ಕುದುರೆಗೆ ವಿವೇಕದ ಲಗಾಮು ಹಾಕಿ ಆದಷ್ಟು ಸರಳಜೀವನಕ್ಕೆ ಬದಲಾಗಬೇಕಿದೆ. ಇಲ್ಲದಿದ್ದರೆ ಮನುಷ್ಯನ ಜೀವನವೇ ಯಾಂತ್ರೀಕೃತವಾಗಿ ಮನುಷ್ಯ ಸಂಬಂಧಗಳು ನಶಿಸಿಹೋಗುವುದರಲ್ಲಿ ಅನುಮಾನವಿಲ್ಲ.