ರಾಜ್ಯದ ಹಲವೆಡೆ ಮಠ-ಮಾನ್ಯಗಳಿದ್ದರೂ ಹೆಚ್ಚಿನವು ಕೆಲವು ಭಕ್ತರಿಗಷ್ಟೇ ಸೀಮಿತವಾಗಿವೆ. ಅನೇಕ ಮಠಾಧೀಶರು ತಮ್ಮ ಕಾಯಕ ಮರೆತಿರುವುದರಿಂದ ಗುರು-ಶಿಷ್ಯರ ಸಂಬಂಧ ಕೂಡ ದೂರವಾಗುತ್ತಾ ಸಾಗುತ್ತಿದೆ. ಸಿದ್ಧಗಂಗಾ ಮಠದ ಅನ್ನ ದಾಸೋಹ, ಅಕ್ಷರ ದಾಸೋಹ, ಭಕ್ತರ ಜೊತೆ ಬೆರೆಯುತ್ತಿದ್ದ ಶ್ರೀಗಳ ಸರಳ ಗುಣ, ಬಡ ಮಕ್ಕಳಿಗೆ ತೋರುತ್ತಿದ್ದ ಕಾಳಜಿಯಂತಹ ಚಿಂತನೆಗಳನ್ನು ಎಲ್ಲ ಮಠಗಳ ಮಠಾಧೀಶರೂ ಮೈಗೂಡಿಸಿಕೊಂಡರೆ ಸಮಾಜ ಸುಧಾರಣೆ ಸಾಧ್ಯ. ಆದರೆ ಅಂತಹ ಕಾರ್ಯ ಇತರ ಮಠಗಳಲ್ಲಿ ನಡೆಯುತ್ತಿಲ್ಲವೇಕೆ?