ಹಳ್ಳಿಗಳಲ್ಲಿ ರಾಜಕಾಲುವೆ ನಿರ್ಮಿಸಿ, ಹರಿದು ಬರುವ ಮಳೆ ನೀರನ್ನು ಕೆರೆಯಲ್ಲಿ ಸಂಗ್ರಹಿಸಿ, ಕೆರೆನೀರು ಆವಿಯಾಗದಂತೆ ಸಂರಕ್ಷಿಸಬಹುದು. ಇದರಿಂದ ಕೃಷಿಗೆ, ದನ ಕರುಗಳಿಗೆ ನೀರು ದೊರೆಯುತ್ತದೆ (ಕೆರೆಗಳಿಂದ ಕೋಟ್ಯಂತರ ಲೀಟರ್ ನೀರು ಆವಿಯಾಗಿ ನಷ್ಟವಾಗುತ್ತಿದೆ). ಕೆರೆಗಳಲ್ಲಿ ಮೀನು ಸಾಕಣೆ ಮಾಡಿ ಲಾಭ ಗಳಿಸಬಹುದು. ಕೆರೆಗಳ ಸುತ್ತಲೂ ಮರ ಬೆಳೆಸಿ, ಈ ಜೀವಂತ ಬೇಲಿಗಳ ಮೂಲಕ ಕೆರೆ ನೀರು ಆವಿಯಾಗದಂತೆ ಸಂರಕ್ಷಿಸಬಹುದು.