‘ಸ್ವಾಮೀಜಿಗಳು ಮದುವೆ ಆಗಿಯೇ ಮಠ ನಡೆಸಲಿ’ ಎಂದು ಚಿತ್ತಾಪುರ ತಾಲ್ಲೂಕಿನ ಕರದಾಳ್ ಬ್ರಹ್ಮರ್ಷಿ ನಾರಾಯಣ ಗುರುಗಳ ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿರುವುದು (ಪ್ರ.ವಾ., ಸೆ. 12) ಸರಿಯಾಗಿಯೇ ಇದೆ! ಈ ಹಿಂದೆ ಋಷಿಮುನಿಗಳು, ವೇದವ್ಯಾಸರು, ಬಸವಣ್ಣನವರು ಸೇರಿದಂತೆ ಅನೇಕರು ಮದುವೆಯಾಗಿ ಆಶ್ರಮ ನಡೆಸಿದ್ದಾರೆ. ವಿವಾಹದ ನಂತರವೂ ಅಂದರೆ ಬ್ರಹ್ಮಚರ್ಯದ ನಂತರದ ಆಶ್ರಮವಾಗಿರುವ ಗೃಹಸ್ಥಾಶ್ರಮವನ್ನು ಪ್ರವೇಶಿಸಿದ ನಂತರವೂ ತಪಸ್ಸು ಕೈಗೊಳ್ಳುತ್ತಿದ್ದರು. ಅಲ್ಲದೆ ಮದುವೆಯಾದ ನಂತರವೂ ನಮ್ಮ ಅನೇಕ ಋಷಿಮುನಿಗಳು ಬ್ರಹ್ಮಚರ್ಯವನ್ನು ಪಾಲಿಸುತ್ತಿದ್ದರು. ಮಹರ್ಷಿ ಯಾಜ್ಞ್ಯವಲ್ಕ್ಯರಂತೂ ಎರಡೆರಡು ಮದುವೆಯಾಗಿದ್ದರು. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಪ್ರಣವಾನಂದ ಸ್ವಾಮೀಜಿಯ ಹೇಳಿಕೆಯಲ್ಲಿ ಅರ್ಥವಿದೆ!