ಈಗಿನ ಪ್ರಧಾನಿಯವರು ಅಧಿಕಾರಕ್ಕೆ ಬರುವಾಗ ‘ಹಿಂದಿನ ಸರ್ಕಾರಗಳು ಲಂಚದಲ್ಲೇ ಬದುಕಿವೆ. ನಾವು ಆ ರೀತಿ ಇಲ್ಲ. ನಮ್ಮದು ಸಿದ್ಧಾಂತ, ತತ್ವ, ಪಕ್ಷನಿಷ್ಠೆ, ಅಭಿವೃದ್ಧಿಗಾಗಿ ತುಡಿತ. ಮುಂದೆ ಹೊಸ ಕ್ರಾಂತಿ ಶುರುವಾಗುತ್ತದೆ. ದೇಶ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿಯಾಗುತ್ತದೆ. ಜನಸಾಮಾನ್ಯರು ನಿರಾಳವಾಗಿ ಬದುಕಬಹುದು’ ಎಂಬಂತಹ ಉದ್ಘೋಷಗಳನ್ನು ಮಾಡಿದ್ದರು. ಆದರೆ ಕರ್ನಾಟಕವೂ ಒಳಗೊಂಡಂತೆ ಇಡೀ ದೇಶದಲ್ಲಿ ಲಂಚಗುಳಿತನ, ಭ್ರಷ್ಟತೆ, ಅಧಿಕಾರದ ವ್ಯಾಮೋಹಗಳಿಂದ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರುವ ನಡೆ ಮುಂದುವರಿದಿದೆ. ಹೀಗಿರುವಾಗ ಲಂಚ ಮತ್ತು ಭ್ರಷ್ಟಾಚಾರವನ್ನು ಬುಡಸಮೇತ ನಿರ್ನಾಮಗೊಳಿಸುವ ಪ್ರತಿಜ್ಞೆ ಮಾಡಿದ್ದ ಪ್ರಧಾನಿಯವರು ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲಿ ಅಥವಾ ಮುಖ್ಯಮಂತ್ರಿಯವರಾದರೂ ಮಾತನಾಡಲಿ.