ಕುಂದು ಕೊರತೆ - ಜನದನಿ | ಮಳೆ ಬಂದರೆ ಕಾಲುವೆಯಾಗುವ ರಸ್ತೆ
ಮಲ್ಲೇಶ್ವರಂನಿಂದ ಮೆಜೆಸ್ಟಿಕ್ಗೆ ಸಂಪರ್ಕ ಕಲ್ಪಿಸುವ ರೈಲ್ವೆ ಪ್ಲಾಟ್ಫಾರ್ಮ್ ರಸ್ತೆಯು ಮಳೆ ಬಂದಾಗ ಕಾಲುವೆಯಾಗುತ್ತದೆ. ದ್ವಿಚಕ್ರ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. 50 ಮೀಟರ್ ಅಂತರದಲ್ಲಿ ಇರುವ ರಾಜಕಾಲುವೆಗೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. 10–12 ವರ್ಷಗಳಿಂದ ಚರಂಡಿಯಲ್ಲಿರುವ ಹೂಳು ತೆಗೆದಿಲ್ಲ.Last Updated 12 ಜೂನ್ 2022, 19:33 IST