ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

public opinion

ADVERTISEMENT

ಕುಂದು ಕೊರತೆ: ರಾಜಕಾಲುವೆ ಸ್ವಚ್ಛಗೊಳಿಸಿ

ನಾಗರಬಾವಿ 9ನೇ ಬ್ಲಾಕ್‌ನ 2ನೇ ಹಂತದ 14ನೇ ಕ್ರಾಸ್‌ನಲ್ಲಿರುವ ರಾಜಕಾಲುವೆಯಲ್ಲಿ ಹೂಳು ತುಂಬಿಕೊಂಡು ಗಬ್ಬೆದ್ದು ನಾರುತ್ತಿದೆ.
Last Updated 18 ಜೂನ್ 2023, 22:27 IST
ಕುಂದು ಕೊರತೆ: ರಾಜಕಾಲುವೆ ಸ್ವಚ್ಛಗೊಳಿಸಿ

ಕುಂದು ಕೊರತೆ - ಜನದನಿ | ಮಳೆ ಬಂದರೆ ಕಾಲುವೆಯಾಗುವ ರಸ್ತೆ

ಮಲ್ಲೇಶ್ವರಂನಿಂದ ಮೆಜೆಸ್ಟಿಕ್‌ಗೆ ಸಂಪರ್ಕ ಕಲ್ಪಿಸುವ ರೈಲ್ವೆ ಪ್ಲಾಟ್‌ಫಾರ್ಮ್‌ ರಸ್ತೆಯು ಮಳೆ ಬಂದಾಗ ಕಾಲುವೆಯಾಗುತ್ತದೆ. ದ್ವಿಚಕ್ರ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. 50 ಮೀಟರ್‌ ಅಂತರದಲ್ಲಿ ಇರುವ ರಾಜಕಾಲುವೆಗೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. 10–12 ವರ್ಷಗಳಿಂದ ಚರಂಡಿಯಲ್ಲಿರುವ ಹೂಳು ತೆಗೆದಿಲ್ಲ.
Last Updated 12 ಜೂನ್ 2022, 19:33 IST
ಕುಂದು ಕೊರತೆ - ಜನದನಿ | ಮಳೆ ಬಂದರೆ ಕಾಲುವೆಯಾಗುವ ರಸ್ತೆ

ಭಾಷೆ: ಯಾವುದೂ ಶುದ್ಧವಲ್ಲ ಮತ್ತೊಂದಕ್ಕಿಂತ

ಕರ್ನಾಟಕದ ಉದ್ದಗಲದಲ್ಲಿ ಬಳಕೆಯಾಗುತ್ತಿರುವ ಕನ್ನಡದ ಮಾತಿನಲ್ಲಿ ಪ್ರತೀ ಹತ್ತು ಹದಿನೈದು ಕಿಲೊ ಮೀಟರ್ ಅಂತರದಲ್ಲಿ ಕನ್ನಡಿಗರು ಉಚ್ಚಾರಣೆ ಮಾಡುವ ಮಾತಿನ ಧ್ವನಿಗಳಲ್ಲಿ, ಪದರೂಪಗಳಲ್ಲಿ ಮತ್ತು ವಾಕ್ಯಗಳಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸಗಳು ಕಂಡುಬರುತ್ತವೆ. ಊರುಗಳ ಅಂತರ ಹೆಚ್ಚಾದಂತೆಲ್ಲ ನುಡಿ ಸಾಮಗ್ರಿಗಳ ಉಚ್ಚಾರಣೆಯ ಸ್ವರೂಪದಲ್ಲಿನ ವ್ಯತ್ಯಾಸವೂ ಹೆಚ್ಚಾಗುತ್ತದೆ. ಇದು ಕನ್ನಡ ಭಾಷೆಯಲ್ಲಿರುವ ಒಳನುಡಿಗಳ ಬಗೆಗಳನ್ನು ಸೂಚಿಸುತ್ತದೆ. ಇವುಗಳಲ್ಲಿ ಯಾವೊಂದು ರೂಪದ ಕನ್ನಡವನ್ನು ‘ಇದು ಶುದ್ಧ ಕನ್ನಡವಲ್ಲ ಹಾಗೂ ಸ್ಪಷ್ಟ ಕನ್ನಡವಲ್ಲ’ ಎಂದು ನಿರಾಕರಿಸಬಾರದು.
Last Updated 10 ಡಿಸೆಂಬರ್ 2021, 19:42 IST
fallback

ಅತಿಶಯೋಕ್ತಿ ಎನಿಸದ ನಡೆ!

ಗುತ್ತಿಗೆದಾರರು ಶೇ 40ರಷ್ಟು ಕಮಿಷನ್ ನೀಡಬೇಕಾದ ಬಗ್ಗೆ ಪ್ರಧಾನಿಗೆ ಪತ್ರ ಬರೆದ ಸುದ್ದಿ ಆಡಳಿತ ಪಕ್ಷದ ವಿರುದ್ಧ ವಿರೋಧ ಪಕ್ಷದವರು ಕಿಡಿಕಾರಲು ಉಪಯೋಗವಾಯಿತು. ಆದರೆ ಜನಸಾಮಾನ್ಯರಿಗೆ ಇದು ಅತಿಶಯೋಕ್ತಿ ಎನಿಸಲಿಲ್ಲ. ಇದು ಸಾರ್ವಜನಿಕ ಸತ್ಯ ಎಂದು ಜನರು ಸುಮ್ಮನಾದಂತಿದೆ. ಹೊರೆಯಾದ ಶುಲ್ಕವನ್ನು ಭರಿಸದೇ ಇದ್ದ ವಿದ್ಯಾರ್ಥಿಯನ್ನು ತರಗತಿಯಿಂದ ಹೊರಹಾಕಿದ್ದಕ್ಕೆ ಅವರ ತಂದೆಯು ಪ್ರಧಾನಿಗೆ ಪತ್ರ ಬರೆದು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.
Last Updated 10 ಡಿಸೆಂಬರ್ 2021, 19:42 IST
fallback

ಶುಲ್ಕ ಏರಿಸಬೇಕೇ ವಿನಾ ಇಳಿಸುವುದಲ್ಲ

ಕಸಾಪ ನಿರ್ದಿಷ್ಟ ಉದ್ದೇಶಗಳನ್ನಿಟ್ಟುಕೊಂಡು ಪ್ರಾರಂಭವಾಗಿದ್ದು, ಕೇವಲ ಮತ ಗಳಿಕೆಗಾಗಿ ಸದಸ್ಯತ್ವ ಎನ್ನುವ ಬದಲಿಗೆ ಪ್ರಜ್ಞಾವಂತ ಸದಸ್ಯರ ಕೇಂದ್ರವಾಗಬೇಕು.
Last Updated 10 ಡಿಸೆಂಬರ್ 2021, 19:42 IST
fallback

ಭಾವನೆ ಜೊತೆಗೆ ಇರಲಿ ಜಾಗರೂಕತೆ

ಬಿಬಿಎಂಪಿಯು ಸಮಸ್ಯೆಗಳಿಗೆ ದಂಡ ಸಂಗ್ರಹವೇ ಏಕೈಕ ಪರಿಹಾರ ಎಂದುಕೊಳ್ಳದೆ, ಮಾಲೀಕರು ಕಡ್ಡಾಯವಾಗಿ ನಾಯಿಯ ಮಲವನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ವಿಧಾನದ ಬಗ್ಗೆ ಅರಿವು ಮೂಡಿಸಬೇಕು. ಜೊತೆಗೆ ಅದನ್ನು ‘ಪ್ರತ್ಯೇಕವಾಗಿ’ ಸಂಗ್ರಹಿಸುವ ಸೌಕರ್ಯ ಒದಗಿಸಬೇಕು. ಅದು ಇತರ ತ್ಯಾಜ್ಯದೊಂದಿಗೆ ಮಿಶ್ರಣವಾಗದ ರೀತಿಯಲ್ಲಿ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ನೋಡಿಕೊಳ್ಳಬೇಕು. ಆಗ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ. ಭಾವನೆ ಜೊತೆಗೆ ಜಾಗರೂಕತೆ ಇದ್ದರೆ ಪ್ರಾಣಿಗಳ ಸಖ್ಯ ಎಷ್ಟೊಂದು ಚೆಂದ ಅಲ್ಲವೇ?
Last Updated 10 ಡಿಸೆಂಬರ್ 2021, 19:42 IST
fallback

ಚುನಾವಣಾ ಪ್ರಕ್ರಿಯೆ ಬದಲಾಗಲಿ

ಒಟ್ಟು ತಾಲ್ಲೂಕಿನಲ್ಲಿ ಇರುವ ಮತದಾರರು 348. ಮತಗಟ್ಟೆಗಳ ಸಂಖ್ಯೆ 42. ಇದಕ್ಕಾಗಿ ಚುನಾವಣಾ ಪ್ರಕ್ರಿಯೆಯ ಎಲ್ಲಾ ನಿಯಮಗಳು ಪಾಲನೆಯಾಗಬೇಕು. ಇದರ ಬದಲಾಗಿ ತಾಲ್ಲೂಕು ಮುಖ್ಯಕೇಂದ್ರದಲ್ಲಿ ಒಂದೋ ಎರಡೋ ಮತಗಟ್ಟೆ ಮಾಡಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮತದಾನ ಮಾಡಲು ವಾಹನ ವ್ಯವಸ್ಥೆ ಮಾಡಬಹುದಿತ್ತು. ಇದರಿಂದ ಆಡಳಿತ ವೆಚ್ಚ ತಗ್ಗಿಸಬಹುದಿತ್ತಲ್ಲದೆ ಇತರ ಇಲಾಖೆಗಳು ಸುಸೂತ್ರವಾಗಿ ಕೆಲಸ ನಿರ್ವಹಿಸಬಹುದಿತ್ತು.
Last Updated 10 ಡಿಸೆಂಬರ್ 2021, 19:42 IST
fallback
ADVERTISEMENT

ಸೌಜನ್ಯದ ನಡೆ ಕಸಿದ ಮೊಬೈಲ್‌

ಕೆಲವು ವರ್ಷಗಳ ಹಿಂದೆ ನನ್ನ ಮಗ ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಪಿಯು ಓದುತ್ತಿದ್ದಾಗ ಕಾಲೇಜಿನ ಗೋಡೆಗಳ ಮೇಲೆ ಅಲ್ಲಲ್ಲಿ ತೂಗಾಡುತ್ತಿದ್ದ ‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಎಂಬಂತಹ ಫಲಕಗಳು ನನ್ನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿದ್ದವು. ಮಕ್ಕಳು ಮೊಬೈಲ್ ಒತ್ತುತ್ತಾ ಕುಳಿತರೆಂದರೆ ಎದುರಿಗೆ ಯಾರೇ ಬಂದರೂ ತಲೆ ಎತ್ತಿ ನೋಡುವಷ್ಟು ಸೌಜನ್ಯವೂ ಅವರಲ್ಲಿ ಇರುವುದಿಲ್ಲ. ಈ ಮೊಬೈಲ್‌ನಿಂದ ಮನುಷ್ಯರ ನಡುವಿನ ಸಂಬಂಧಗಳು, ಓದುವ, ಬರೆಯುವ ಹವ್ಯಾಸಗಳೆಲ್ಲಾ ಮರೆಯಾಗಿ ಹೋಗಿವೆ. ನಮಗಂತೂ ಬೆಳಿಗ್ಗೆ ಮುಂಚೆ ಪತ್ರಿಕೆ ಓದದೇ ಇದ್ದರೆ ಅಂದು ಇಡೀ ದಿನವೆಲ್ಲಾ ಏನನ್ನೋ ಕಳೆದುಕೊಂಡ ಅನುಭವ. ಈಗಿನ ಮಕ್ಕಳಲ್ಲಿ, ‘ನೀವು ಪತ್ರಿಕೆ ಓದುವುದಿಲ್ಲವೇ?’ ಎಂದು ಪ್ರಶ್ನಿಸಿದರೆ, ‘ನಾವು ಮೊಬೈಲ್‌ನಲ್ಲಿಯೇ ಪತ್ರಿಕೆ ನೋಡುತ್ತೇವೆ’ ಎಂಬ ಉತ್ತರ ಬರುತ್ತದೆ. ಪತ್ರಿಕೆಯನ್ನು ಕೈಯಲ್ಲಿ ಹಿಡಿದುಕೊಂಡು ಓದುವುದರಲ್ಲಿ ಸಿಗುವ ತೃಪ್ತಿ ಮೊಬೈಲ್‌ನಲ್ಲಿ ಓದುವುದರಲ್ಲಿ ಅದ್ಹೇಗೆ ಸಿಗುವುದೋ ದೇವರೇ ಬಲ್ಲ!
Last Updated 9 ಡಿಸೆಂಬರ್ 2021, 19:39 IST
fallback

ಪ್ರತಿಕ್ರಿಯೆಯ ಬಗ್ಗೆ ಇರಲಿ ಪ್ರಜ್ಞೆ

ನಾಗರಿಕ ಸಮಾಜ ತಲೆ ತಗ್ಗಿಸದ ರೀತಿಯಲ್ಲಿ ಪ್ರತಿಕ್ರಿಯಿಸುವ ಪ್ರಜ್ಞೆ ಇಂತಹವರಿಗೆ ಬರುವುದು ಈ ಕ್ಷಣದ ಅಗತ್ಯವಾಗಿದೆ.
Last Updated 9 ಡಿಸೆಂಬರ್ 2021, 19:39 IST
fallback

ನಕಲಿ ದಾಖಲೆ ವೀರರಿದ್ದಾರೆ... ಎಚ್ಚರ

‘ಅರ್ಜಿ ಸಲ್ಲಿಸಿದ ಒಂದು ದಿನದಲ್ಲೇ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಆದೇಶ ಹೊರಡಿಸಲು ಅವಕಾಶ ಕಲ್ಪಿಸುವ ಯೋಜನೆಯನ್ನು ಜಾರಿಗೊಳಿಸಲಾಗುವುದು’ ಎಂದು ಕಂದಾಯ ಸಚಿವರು ಹೇಳಿರುವುದು (ಪ್ರ.ವಾ., ಡಿ. 9) ಸಂತೋಷದ ಸಂಗತಿ. ಆದರೆ ಸರ್ಕಾರ ಈ ಯೋಜನೆಯನ್ನು ಆತುರಾತುರವಾಗಿ ಜಾರಿಗೆ ತರದೆ, ಅದನ್ನು ಪರಿಶೀಲಿಸಿ, ತಜ್ಞರಿಂದ ಸಲಹೆ ಪಡೆಯುವುದು ಸೂಕ್ತ.
Last Updated 9 ಡಿಸೆಂಬರ್ 2021, 19:38 IST
fallback
ADVERTISEMENT
ADVERTISEMENT
ADVERTISEMENT