ಹೆಲಿಕಾಪ್ಟರ್ ದುರಂತದಲ್ಲಿ ಭಾರತದ ಸೇನಾಪಡೆಗಳ ಮೊದಲ ಮುಖ್ಯಸ್ಥ ಬಿಪಿನ್ ರಾವತ್ ಅವರು ಅಕಾಲಮರಣಕ್ಕೆ ಈಡಾಗಿರುವುದು ಇಡೀ ದೇಶವೇ ದುಃಖಪಡುವ ಆಘಾತಕಾರಿ ಸಂಗತಿ. ಆದರೆ, ತಿಳಿದವರು ಎನಿಸಿಕೊಳ್ಳುವ ಕೆಲವರು ಇದಕ್ಕೆ ವಿಕೃತವಾಗಿ ಟ್ವೀಟ್ ಮಾಡಿದ್ದಾರೆ. ನಾಗರಿಕ ಸಮಾಜ ತಲೆ ತಗ್ಗಿಸದ ರೀತಿಯಲ್ಲಿ ಪ್ರತಿಕ್ರಿಯಿಸುವ ಪ್ರಜ್ಞೆ ಇಂತಹವರಿಗೆ ಬರುವುದು ಈ ಕ್ಷಣದ ಅಗತ್ಯವಾಗಿದೆ.