ನಾಯಿಗಳ ಬಗ್ಗೆ ಮಾಲೀಕರಿಗೆ ಭಾವನಾತ್ಮಕ ಮನೋಭಾವ ಸಹಜ ಮತ್ತು ಅದು ಮಾನವೀಯ ಗುಣ ಕೂಡ ಹೌದು. ಆದರೆ, ಆ ಮೂಕಪ್ರಾಣಿಗಳನ್ನು ಸಾಕುವವರು ತಮ್ಮ ಸುತ್ತಲಿನ ಪರಿಸರ, ಜನರ ಸುರಕ್ಷತೆ ಬಗ್ಗೆ ಕಾಳಜಿ ವಹಿಸದೇ ಇರುವುದನ್ನೇ ಹೆಚ್ಚಾಗಿ ನೋಡುತ್ತೇವೆ. ಈ ವಿಚಾರದಲ್ಲಿ ನ್ಯಾಯಾಲಯವು ಬೃಹತ್ ಬೆಂಗಳೂರು ಮಹಾ ನಗರಪಾಲಿಕೆಗೆ (ಬಿಬಿಎಂಪಿ) ಮೌಖಿಕ ಎಚ್ಚರಿಕೆ ನೀಡಿ, ಮಾಲೀಕರು ನಾಯಿಗಳನ್ನು ಸಾರ್ವಜನಿಕ ಸ್ಥಳಗಳಿಗೆ ಕರೆ ತಂದು ಮಲ, ಮೂತ್ರ ವಿಸರ್ಜನೆ ಮಾಡಿಸುವುದನ್ನು ತಡೆಯಲು ಕ್ರಮ ಜರುಗಿಸಬೇಕು ಎಂದಿರುವುದು ಸೂಕ್ತವಾಗಿದೆ (ಪ್ರ.ವಾ., ಡಿ. 10).