<p class="Briefhead"><strong>ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳ ಮೇಲೆ ಕೊರೊನಾ ವೈರಾಣುವಿನ ಭೀಕರ ಛಾಯೆ ಕವಿದಿರುವ ಈ ಸಂದರ್ಭದಲ್ಲಿ, ಪರ್ಯಾಯ ವೈದ್ಯಕೀಯ ಪದ್ಧತಿಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆಯುರ್ವೇದ ಮತ್ತು ಹೋಮಿಯೋಪಥಿ ಕುರಿತು ಅಲೋಪಥಿ ಅರ್ಥಾತ್ ಪಾಶ್ಚಿಮಾತ್ಯ ವೈದ್ಯಕೀಯ ಪದ್ಧತಿಯ ತಜ್ಞರು ಈಗಲೂ ಪೂರ್ವಗ್ರಹ ಹೊಂದಿದ್ದು, ಈ ಎರಡೂ ಬಗೆಯ ಪದ್ಧತಿಗಳಲ್ಲಿನ ಔಷಧಿಗಳು ಕೊರೊನಾ ವೈರಾಣು ತಡೆಗೆ ಪರಿಣಾಮಕಾರಿ ಅಲ್ಲ ಎಂದು ವಾದಿಸುತ್ತಿದ್ದಾರೆ.</strong></p>.<p><strong>ದೇಶ ವಿದೇಶಗಳಲ್ಲಿ ಈ ಮೂರೂ ವೈದ್ಯಕೀಯ ಪದ್ಧತಿಗಳಲ್ಲಿ ಪ್ರಯೋಗಗಳು ನಡೆಯುತ್ತಿವೆ. ಯಾವ ಪದ್ಧತಿಯ ಔಷಧ ಹೆಚ್ಚು ಪರಿಣಾಮಕಾರಿ ಎಂಬುದು ಇನ್ನು ಕೆಲವೇ ದಿನಗಳಲ್ಲಿ ಖಚಿತವಾಗಲಿದೆ. ಹಾಗಾಗಿ ಯಾವುದೇ ಪದ್ಧತಿಯ ಔಷಧವನ್ನು ಕಡೆಗಣಿಸುವುದಾಗಲೀ ಒಂದು ಪದ್ಧತಿಯ ಬಗ್ಗೆ ಇತರ ಪದ್ಧತಿಯವರಿಗೆ ತಾತ್ಸಾರ ಅಥವಾ ಮತ್ಸರವಾಗಲೀ ಬೇಡ. ಈ ಎಲ್ಲ ಚಿಕಿತ್ಸಾ ಪದ್ಧತಿಗಳ ಉದ್ದೇಶ ಒಂದೇ- ಅದು ರೋಗ ನಿವಾರಿಸುವುದು ಹಾಗೂ ಮನುಷ್ಯನ ಜೀವ ಉಳಿಸುವುದು!</strong></p>.<p><em><strong>ಕೆ.ಲಕ್ಷ್ಮೀಕಾಂತ್ ರಾವ್, <span class="Designate">ಮಂಗಳೂರು</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="Briefhead"><strong>ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳ ಮೇಲೆ ಕೊರೊನಾ ವೈರಾಣುವಿನ ಭೀಕರ ಛಾಯೆ ಕವಿದಿರುವ ಈ ಸಂದರ್ಭದಲ್ಲಿ, ಪರ್ಯಾಯ ವೈದ್ಯಕೀಯ ಪದ್ಧತಿಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆಯುರ್ವೇದ ಮತ್ತು ಹೋಮಿಯೋಪಥಿ ಕುರಿತು ಅಲೋಪಥಿ ಅರ್ಥಾತ್ ಪಾಶ್ಚಿಮಾತ್ಯ ವೈದ್ಯಕೀಯ ಪದ್ಧತಿಯ ತಜ್ಞರು ಈಗಲೂ ಪೂರ್ವಗ್ರಹ ಹೊಂದಿದ್ದು, ಈ ಎರಡೂ ಬಗೆಯ ಪದ್ಧತಿಗಳಲ್ಲಿನ ಔಷಧಿಗಳು ಕೊರೊನಾ ವೈರಾಣು ತಡೆಗೆ ಪರಿಣಾಮಕಾರಿ ಅಲ್ಲ ಎಂದು ವಾದಿಸುತ್ತಿದ್ದಾರೆ.</strong></p>.<p><strong>ದೇಶ ವಿದೇಶಗಳಲ್ಲಿ ಈ ಮೂರೂ ವೈದ್ಯಕೀಯ ಪದ್ಧತಿಗಳಲ್ಲಿ ಪ್ರಯೋಗಗಳು ನಡೆಯುತ್ತಿವೆ. ಯಾವ ಪದ್ಧತಿಯ ಔಷಧ ಹೆಚ್ಚು ಪರಿಣಾಮಕಾರಿ ಎಂಬುದು ಇನ್ನು ಕೆಲವೇ ದಿನಗಳಲ್ಲಿ ಖಚಿತವಾಗಲಿದೆ. ಹಾಗಾಗಿ ಯಾವುದೇ ಪದ್ಧತಿಯ ಔಷಧವನ್ನು ಕಡೆಗಣಿಸುವುದಾಗಲೀ ಒಂದು ಪದ್ಧತಿಯ ಬಗ್ಗೆ ಇತರ ಪದ್ಧತಿಯವರಿಗೆ ತಾತ್ಸಾರ ಅಥವಾ ಮತ್ಸರವಾಗಲೀ ಬೇಡ. ಈ ಎಲ್ಲ ಚಿಕಿತ್ಸಾ ಪದ್ಧತಿಗಳ ಉದ್ದೇಶ ಒಂದೇ- ಅದು ರೋಗ ನಿವಾರಿಸುವುದು ಹಾಗೂ ಮನುಷ್ಯನ ಜೀವ ಉಳಿಸುವುದು!</strong></p>.<p><em><strong>ಕೆ.ಲಕ್ಷ್ಮೀಕಾಂತ್ ರಾವ್, <span class="Designate">ಮಂಗಳೂರು</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>