ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಲಕ್ಕಿ ಬಳಕೆ: ಉನ್ನತ ತನಿಖೆಯಾಗಲಿ!

Last Updated 26 ಜನವರಿ 2020, 19:45 IST
ಅಕ್ಷರ ಗಾತ್ರ

ಮಧ್ಯಪ್ರದೇಶದ ಇಂದೋರ್‌ನ ರಾಜಕೀಯ ಮುಖಂಡ ಕೈಲಾಸ್‌ ವಿಜಯ್‌ ವರ್ಗೀಯ ಅವರು ಅವಲಕ್ಕಿ ತಿನ್ನುವವರನ್ನು ಬಾಂಗ್ಲಾದೇಶೀಯರೆಂದು ಗುರುತಿಸಬಹುದು ಎಂದಿದ್ದಾರೆ. ಹಿಂದೆ ಪುರಾಣದಲ್ಲಿ ಬಡ ಸುಧಾಮನ ಅವಲಕ್ಕಿಯ ಗಂಟನ್ನು ಕಂಡು, ಮಿತ್ರ ಶ್ರೀಕೃಷ್ಣ ಅದನ್ನೇ ಪಡೆದು ತುಂಬಾ ಸಂತಸದಿಂದ ಸ್ವೀಕರಿಸಿ ತಿಂದಿದ್ದನ್ನು ಓದಿದ್ದೇವೆ, ಕೇಳಿದ್ದೇವೆ. ಹಾಗಾದರೆ ಇವರಿಬ್ಬರೂ ಬಾಂಗ್ಲಾದೇಶೀಯರೇ? ಈ ಬಗ್ಗೆ ಮೊದಲು ಕೂಲಂಕಷವಾಗಿ ಉನ್ನತ ಮಟ್ಟದ ತನಿಖೆಯಾಗಲಿ! ಭಾರತದಲ್ಲಿ ಅವಲಕ್ಕಿಗೆ ಆಹಾರವಾಗಿ ತನ್ನದೇ ಆದ ಮಹತ್ವ ಇದೆ. ಭಾರತದಲ್ಲಿ ಅವಲಕ್ಕಿ ಬಳಸುವವರೆಲ್ಲರೂ ಬಾಂಗ್ಲಾದೇಶೀಯರೇ?

– ನಗರ ಗುರುದೇವ್ ಭಂಡಾರ್ಕರ್,ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT