ಐದು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಚುನಾವಣೆ ಫಲಿತಾಂಶಗಳು ನಿರಾಶಾದಾಯಕವೂ ಅಲ್ಲ, ಉಲ್ಲಾಸದಾಯಕವೂ ಅಲ್ಲ.
ಸಾರ್ವಜನಿಕರು ಅತೀ ಬುದ್ಧಿವಂತಿಕೆಯಿಂದ ತಮ್ಮ ಮತ ಚಲಾಯಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ರಾಷ್ಟ್ರದ ಬೆಳವಣಿಗೆಯ ಹಿತದೃಷ್ಟಿಯಿಂದ 10 ವರ್ಷಗಳಿಗೊಂದಾವರ್ತಿ ಸರ್ಕಾರ ಬದಲಾಗಬೇಕು. ಒಂದೇ ರಾಜಕೀಯ ಪಕ್ಷ ಬಹುಕಾಲ ಆಡಳಿತದಲ್ಲಿದ್ದರೆ ಅದು ಸರ್ವಾಧಿಕಾರದತ್ತ ಹೊರಳಿ ದೇಶದ ಏಳಿಗೆಗೆ ಅಡಚಣೆ ಉಂಟಾಗುತ್ತದೆ.