ವಿಟಿಯು 1998ರಲ್ಲಿ ಆರಂಭವಾಯಿತು. ಹಸಿರು ಕಾಡಿನ ಸುಂದರ ಪರಿಸರದಲ್ಲಿ, ಅದ್ಭುತವಾದ ವಾಸ್ತು ವಿನ್ಯಾಸದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದು ಊರಿಗೊಂದು ಭೂಷಣವೇ ಹೌದು. ರಾಜೀವ್ ಗಾಂಧಿ ವೈದ್ಯಕೀಯ ವಿಶ್ವ
ವಿದ್ಯಾಲಯ, ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ, ಹಂಪಿಯ ಕನ್ನಡ ವಿಶ್ವವಿದ್ಯಾಲಯ- ಇವೆಲ್ಲವೂ ಒಂದೇ ಆಗಿಲ್ಲವೆ? ಹಾಗಾದರೆ ಇದನ್ನು ಮಾತ್ರ ಯಾಕೆ ಒಡೆಯುತ್ತೀರಿ? ವಿಟಿಯು ವಿಂಗಡಣಾ ನೀತಿಗೆ ಪುಷ್ಟಿ ನೀಡುವಂತೆ ಅವುಗಳನ್ನು ಸಹ ಒಡೆದು ಉತ್ತರ-ದಕ್ಷಿಣ, ಪೂರ್ವ- ಪಶ್ಚಿಮಗಳಿಗೆ ಹಂಚಿಬಿಡಿ ಎಂಬ ಒಣ ತರ್ಕವೊಂದು ಜನ್ಮತಾಳಿ ಚರ್ಚೆ ಶುರುವಾಗುವುದಿಲ್ಲವೇ? ಹೀಗೆ ಮತ್ತೊಂದು ಹೊಸ ವಾದಕ್ಕೆ ಅವಕಾಶವಾಗುವ ಮುನ್ನ ಮುಖ್ಯಮಂತ್ರಿ ತಕ್ಷಣ ತಮ್ಮ ನಿರ್ಧಾರವನ್ನು ಕೈಬಿಡಬೇಕು.