‘ಕೆಲವರು ದೇಶಪ್ರೇಮದ ಹೆಸರಿನಲ್ಲಿ ಹೊಸ ಪೀಳಿಗೆಯ ಮಿದುಳಲ್ಲಿ ಗಾಂಧಿ ದ್ವೇಷ ತುಂಬುತ್ತಿದ್ದಾರೆ’ ಎಂದು ನಾರಾಯಣ ಎ. ಅವರು ತಮ್ಮ ಲೇಖನದಲ್ಲಿ ಹೇಳಿರುವುದು (ಪ್ರ.ವಾ., ಅ. 2) ಕಟು ವಾಸ್ತವ. ಆದರೂ ಅವರು, ಸಣ್ಣ ಸಂಖ್ಯೆಯ ಮಂದಿಯನ್ನು ಹೊರತುಪಡಿಸಿದರೆ ಗಾಂಧಿಯವರನ್ನು ಭಾರತೀಯರು ಎಂದೂ ಪ್ರೀತಿಸಲೂ ಇಲ್ಲ, ಗೌರವಿಸಲೂ ಇಲ್ಲ ಎಂದಿರುವುದು ಉತ್ಪ್ರೇಕ್ಷೆ ಎನಿಸುತ್ತದೆ. ಹಳೆ ತಲೆಮಾರಿನ, ಅದರಲ್ಲೂ ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧಿ ಬೆನ್ನಿಗೆ ನಿಂತ ಬಹುಮಂದಿ ಅವರ ಮೇಲಿನ ಪ್ರೀತಿ, ಗೌರವದಿಂದ ತ್ಯಾಗ, ಬಲಿದಾನ ಮಾಡಿದ್ದನ್ನು ಅಲ್ಲಗಳೆಯುವುದು ವಾಸ್ತವಕ್ಕೆ ದೂರವಾದುದು.