ಅಕ್ರಮ ಮನೆ ಮತ್ತು ನಿವೇಶನಗಳ ಸಕ್ರಮಕ್ಕೆ ಸೂಕ್ತ ನಿಯಮಗಳನ್ನು ಶೀಘ್ರವಾಗಿ ರೂಪಿಸಿ ಸಕಾಲಕ್ಕೆ ಅನುಷ್ಠಾನಗೊಳಿಸದಿರುವುದರಿಂದ ಬಹಳಷ್ಟು ಅಕ್ರಮದಾರರು ಎತ್ತಂಗಡಿಯಾಗುವ ಆತಂಕ ಎದುರಿಸುತ್ತಿದ್ದಾರೆ ಹಾಗೂ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಅಕ್ರಮ– ಸಕ್ರಮದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಾಗ ಹೇಳಿಕೆ ನೀಡುತ್ತಿದ್ದರೂ ಇಂದಿಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಇದಕ್ಕೆ ಬೇಗ ಚಾಲನೆ ಸಿಗಲಿ.ಹಕ್ಕುಪತ್ರದ ದಾಖಲೆಗಳಿಲ್ಲದೆ ಅನಿಶ್ಚಿತ ಸ್ಥಿತಿಯಲ್ಲಿರುವ ಫಲಾನುಭವಿಗಳಿಗೆ ಅನುಕೂಲ ದೊರೆಯಲಿ.