ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷರ ಬದಲಾವಣೆ ಬೇಡ

Last Updated 4 ಜೂನ್ 2018, 19:30 IST
ಅಕ್ಷರ ಗಾತ್ರ

ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟುಗೂಡಿ ರಾಜ್ಯದಲ್ಲಿ ಸರ್ಕಾರ ರಚಿಸಿವೆ. ‘ಅನ್ಯೋನ್ಯತೆಯಿಂದ ಐದು ವರ್ಷಗಳ ಉತ್ತಮ ಸರ್ಕಾರ ನೀಡುತ್ತೇವೆ’ ಎಂಬ ಭರವಸೆಯನ್ನು ಜನತೆಗೆ ನೀಡಿವೆ. ಈ ಸರ್ಕಾರ ಗುಣಾತ್ಮಕ ಆಡಳಿತವನ್ನು ನೀಡಲಿ ಎಂದು ಆಶಿಸೋಣ.

ಸಾಂಸ್ಕೃತಿಕವಾಗಿ ಕಾರ್ಯನಿರ್ವಹಿಸುವ ಅಕಾಡೆಮಿಗಳ ಅಧ್ಯಕ್ಷರನ್ನು ಹೊಸ ಸರ್ಕಾರವು ಬದಲಾಯಿಸುವುದು ಸರಿಯಲ್ಲ. ಈ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸದಸ್ಯರನ್ನು ರಾಜಕೀಯ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಇಂತಹ ಅಭಿಪ್ರಾಯವನ್ನು ಕೆಲವು ವರ್ಷಗಳಿಂದ ಸಾಹಿತಿಗಳು ಮತ್ತು ಕಲಾವಿದರು ತೀವ್ರವಾಗಿ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಈ ಅಕಾಡೆಮಿಗಳನ್ನು ನಿಗಮ–ಮಂಡಳಿಗಳ ಜೊತೆ ಹೋಲಿಸಿ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ಎಲ್ಲಾ ಅಕಾಡೆಮಿಗಳು ಯಾವುದೇ ಆತಂಕವಿಲ್ಲದೆ ಕಾರ್ಯನಿರ್ವಹಿಸಲು ಪ್ರಸ್ತುತ ಸರ್ಕಾರ ಸಹಕರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT