ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೆಂತಹ ವಾದ?

Last Updated 3 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ಮತ್ತು ನಿವೃತ್ತ ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಕಟ್ಜು ನಮ್ಮ ಚುನಾವಣೆಗಳಲ್ಲಿ ಶೇ 90 ರಷ್ಟು ಜನರು ಕುರಿ ಮತ್ತು ಪಶುಗಳ ಹಾಗೆ ಮತದಾನ ಮಾಡುತ್ತಾರೆ, ಹಾಗಾಗಿ ನಮ್ಮದು ಅರ್ಥಪೂರ್ಣ ಪ್ರಜಾಪ್ರಭುತ್ವವಲ್ಲ, ಜನರು ಜಾತಿ ಮತ್ತು ಧರ್ಮದ ಆಧಾರದ ಮೇಲೆ ಮತದಾನ ಮಾಡುತ್ತಾರೆ ಎನ್ನುತ್ತಾ ಜಾನುವಾರುಗಳ ಸಾಲಿನಲ್ಲಿ ನಿಂತು ನಾನ್ಯಾಕೆ ಸಮಯ ಹಾಳು ಮಾಡಲಿ? ಎಂದು ವಿಷಾದಿಸಿದ್ದಾರೆ.  (ಪ್ರ.ವಾ ಮಾ.31) ಘನತವೆತ್ತ ಪತ್ರಿಕಾ ಮಂಡಳಿ ಅಧ್ಯಕ್ಷರಿಂದ ಇಂತಹ ಹೇಳಿಕೆಗಳನ್ನು ನಿರೀಕ್ಷಿಸಿರಲಿಲ್ಲ.

ಯಾವುದೇ ಒಬ್ಬ ವ್ಯಕ್ತಿ ಜಾತಿ ಮತ್ತು ಧರ್ಮದ ಆಧಾರದಲ್ಲಿ ಮತದಾನ ಮಾಡುತ್ತಾನೆ ಎಂದಿಟ್ಟುಕೊಳ್ಳೋಣ. ಹಾಗೆ ಮತದಾನ ಮಾಡಿದರೆ ಅದರ ಗೋಪ್ಯತೆ ಅವನಿಗೆ ಮಾತ್ರ ತಿಳಿದಿರುತ್ತದೆ. ಕಟ್ಜುರವರು ಶೇ 90 ಜನರ ನಿಜ ಸ್ಥಿತಿ ತಿಳಿದುಕೊಂಡಿದ್ದಾರೆಯೇ?

ಜಾನುವಾರುಗಳ ಸಾಲಿನಲ್ಲಿ ನಿಂತು ನಾನ್ಯಾಕೆ ಸಮಯ ಹಾಳು ಮಾಡಲಿ? ಎಂದಿರುವ ಇವರು ಮತದಾನಕ್ಕೆ ಪ್ರೋತ್ಸಾಹಿಸುವ ಬದಲು ಜನರ ಮನಸ್ಸನ್ನು ಮತದಾನ ಮಾಡದಂತೆ ಪರೋಕ್ಷವಾಗಿ ಎಚ್ಚರಿಸುತ್ತಿದ್ದಾರೆ. ಹಾಗಿದ್ದರೆ ನಮ್ಮಲ್ಲಿ ತಪ್ಪು ಮಾಡಿರುವ ಸಂಜಯ್ ದತ್ ಮತ್ತು ಜೈಬುನ್ನೀಸಾ ಖಾದ್ರಿಯವರಿಗೆ ಕ್ಷಮಾದಾನ ನೀಡುವಂತಹ ರೀತಿಯ ಪ್ರಜಾಪ್ರಭುತ್ವ ವ್ಯವಸ್ಥೆ ಇರಬೇಕೆ ಕಟ್ಜುರವರೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT