‘ಮನುಷ್ಯ ಕಾಲ ಸಂದರ್ಭಗಳಲ್ಲಿ ಬದಲಾಗುತ್ತಾನೆ ಮತ್ತು ಅವನ ಧೋರಣೆಗಳು ಸ್ಥಿರವಾಗಿರದೆ ಚಲನಶೀಲವಾಗಿರುತ್ತವೆ...’ (ಚರಿತ್ರೆಯ ಭಾರ ಹೊರಬೇಕಿಲ್ಲ- ರಾಜಾರಾಮ ತೋಳ್ಪಾಡಿ, ನಿತ್ಯಾನಂದ ಶೆಟ್ಟಿ, ಪ್ರ.ವಾ., ಜುಲೈ 10) ಎಂಬುದು ವೈಜ್ಞಾನಿಕ ನಿಲುವು. ಸಮಂಜಸ
ವಾಗಿದೆ. ಚರಿತ್ರೆಯ ಭಾರ ಹೊರಬೇಕಿಲ್ಲ, ನಿಜ. ಆದರೆ ಚರಿತ್ರೆಯಿಂದ ಪಾಠ ಕಲಿತು, ವಂಚಿತರಿಗೆ ಅವಕಾಶ ಕಲ್ಪಿಸುತ್ತ ಹೋಗಬೇಕು. ಮನುಷ್ಯ ಬದಲಾಗುವುದೇ ಇಲ್ಲ ಎಂಬುದು ಕರ್ಮಠರ ವಾದ. ಬಲಪಂಥೀಯರಿಗೆ ವಾದ– ಚರ್ಚೆಗಳಲ್ಲಿ ನಂಬಿಕೆ ಇಲ್ಲವೆನ್ನುವುದಾದರೆ, ಎಡಪಂಥೀ
ಯರು ಇನ್ನೇನು? ಅವರೂ ಏಕಮುಖಿಗಳಾಗಿದ್ದಾರೆ, ಪೂರ್ವಗ್ರಹ ಪೀಡಿತರಾಗಿದ್ದಾರೆ. ಯಾಕೋ ಎಡವಾದಿಗಳು ಜಡವಾದಿಗಳಾಗುತ್ತಿದ್ದಾರೆ. ಇದೊಂದು ವಿಪರ್ಯಾಸ.