ಸಭೆ ನಡೆಯುತ್ತಿರುವಾಗಲೇ ಕೆ.ಕೆ. ಶೆಟ್ಟಿ ಅವರ ಪರ ಪ್ರಚಾರದ ಅಂಬಾಸಿಡರ್ ಕಾರು ಅಲ್ಲಿಗೆ ಬಂದು ನಿಂತಿತು. ವಾಹನದಲ್ಲಿದ್ದ ಪ್ರಚಾರಕರು ಧ್ವನಿವರ್ಧಕದ ಮೂಲಕ ‘ಐದು ನಿಮಿಷ ನಮಗೆ ಅವಕಾಶ ಕೊಡಿ, ನಾವು ಪ್ರಚಾರ ಮುಗಿಸಿ ಹೊರಡುತ್ತೇವೆ’ ಎಂದಾಗ ಪೂಣಚ್ಚ ಅವರ ಪರ ಪ್ರಚಾರ ಸಭೆಯ ಸಂಘಟಕರು, ಅವರ ಕೋರಿಕೆಯನ್ನು ಒಪ್ಪಿ ಐದು ನಿಮಿಷಗಳ ಕಾಲ ತಮ್ಮ ಸಭೆಯನ್ನು ಸ್ಥಗಿತಗೊಳಿಸಿದರು. ವಿರೋಧಿ ಬಣದವರನ್ನು ಗೌರವಿಸಿ ಅವಕಾಶ ನೀಡಿದರು.