<p>ಚಿತ್ರದುರ್ಗದ ಮುರುಘರಾಜೇಂದ್ರ ಶರಣರು ಒಂದು ಹಳೆಯ ವಿಷಯದ ಬಗ್ಗೆ `ಪ್ರಜಾವಾಣಿ'ಯ `ಸಂಗತ'ದಲ್ಲಿ ಬರೆದಿದ್ದಾರೆ. ಬೃಹನ್ಮಠದ ಮಲ್ಲಿಕಾರ್ಜುನ ಶ್ರೀಗಳವರು ಮಾತುಕತೆಯ ಸಂದರ್ಭದಲ್ಲಿ ಕೈಹಿಡಿದಾಗ ನಾನು ಕೊಸರಿಕೊಂಡೆನು. ಆಗ ಮಲ್ಲಿ ಕಾರ್ಜುನ ಸ್ವಾಮಿಗಳು `ಕೈ ನೋವಾಯಿತೇ? ಚುಚ್ಚಿತೇ?' ಎಂದು ವಿನೋದವಾಗಿ ಪ್ರಶ್ನಿಸಿದ್ದರು.<br /> <br /> ಆಗ ನಾನು ಲಿಂಗಾಯತ ಸ್ವಾಮಿಗಳ ಜೊತೆ ಅಸ್ಪೃಶ್ಯತೆಯಿಂದ ವ್ಯವಹರಿಸಿದ್ದೆನೆಂದೂ ಈಗ ಬಹಳ ಬದಲಾಗಿದ್ದೇನೆಂದೂ ಬರೆದಿದ್ದಾರೆ. ಆದರೆ ಇಂತಹ ಘಟನೆ ಆ ಕಾಲದಲ್ಲಿ ಖಂಡಿತವಾಗಿಯೂ ನಡೆದೇ ಇಲ್ಲ. ಲಿಂಗಾಯತ ಸ್ವಾಮಿಗಳ ಜೊತೆಗಾಗಲೀ ಬೇರೆಯವರ ಜೊತೆಗಾಗಲೀ ನಾನು ಅಸ್ಪೃಶ್ಯತೆಯ ವ್ಯವಹಾರವನ್ನು ಮಾಡಿಯೇ ಇಲ್ಲ.</p>.<p>1954 ರಿಂದಲೂ ಎಲ್ಲಾ ಲಿಂಗಾಯತ ಸ್ವಾಮಿಗಳ ಜೊತೆಗೂ ಸ್ನೇಹ ಸಂಬಂಧವನ್ನು ಬೆಳೆಸಿಕೊಂಡಿದ್ದೇನೆ. ಬ್ರಾಹ್ಮಣ ಮಠಾಧಿಪತಿಗಳಿಗೂ ವೀರಶೈವ ಮಠಾಧಿಪತಿಗಳಿಗೂ ಸ್ನೇಹ ಸಮಾವೇಶವನ್ನು ನಾನೇ ಆರಂಭಿಸಿದ್ದಾಗಿದೆ.<br /> <br /> ಮಠಗಳ ಎಂಡೋಮೆಂಟ್ ವಿವಾದದ ಬಗ್ಗೆ ಮಠಾಧಿಪತಿಗಳ ಸಮಾವೇಶವನ್ನು ದಿವಂಗತ ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ 1978 ರ ಸುಮಾರಿಗೆ ನಡೆದಿದೆ. ಅದಕ್ಕಿಂತಲೂ ಮೊದಲೇ ನಾನು ದಲಿತರ ಕೇರಿಗಳಿಗೆ ಹೋಗಿ ಅಸ್ಪೃಶ್ಯತಾ ನಿವಾರಣೆಯ ಪ್ರಯತ್ನವನ್ನು ಪ್ರಾರಂಭಿಸಿದ್ದೆ.<br /> <br /> ದಲಿತರನ್ನೇ ಅಸ್ಪೃಶ್ಯರಲ್ಲವೆಂದು ಪರಿಗಣಿಸಿ ಅವರ ಕೇರಿ,ಮನೆಗಳಿಗೆ ಹೋಗಿ ಅವರನ್ನು ಸ್ಪರ್ಶಿಸಿದ ನಾನು ಪ್ರತಿಷ್ಠಿತ ಲಿಂಗಾಯತ ಮಠಾಧೀಶರ ಜೊತೆಗೆ ಅಸ್ಪೃಶ್ಯತೆಯಿಂದ ವ್ಯವಹರಿಸಿದ್ದೇನೆಂದು ಕಲ್ಪಿಸಲೂ ಸಾಧ್ಯವಿಲ್ಲ. ವೀರಶೈವ ಮಠಾಧೀಶರನ್ನಾಗಲಿ ಇತರ ಮಠಾಧೀಶರನ್ನಾಗಲಿ ಅಗೌರವಿಸಿಲ್ಲ. ಎಲ್ಲರ ಬಗ್ಗೆಯೂ ನನಗೆ ವಿಶೇಷ ಅಭಿಮಾನವಿದೆ.</p>.<p>ಏನಾದರೂ ತಪ್ಪು ತಿಳಿವಳಿಕೆಯಾಗಿದ್ದಲ್ಲಿ ಅದನ್ನು ಈ ಮೂಲಕ ಸ್ಪಷ್ಟೀಕರಿಸಿ ಸರಿಪಡಿಸುತ್ತಿದ್ದೇನೆ. ಮುರುಘರಾಜೇಂದ್ರ ಶರಣರು ತಮ್ಮ ಲೇಖನದಲ್ಲಿ ನನ್ನ ಬಗ್ಗೆ ತೋರಿದ ಸಹೃದಯತೆ ಮತ್ತು ಅಭಿಮಾನದ ಬಗ್ಗೆ ನನಗೆಸಂತೋಷವಾಗಿದೆ.<br /> <br /> <strong>ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿತ್ರದುರ್ಗದ ಮುರುಘರಾಜೇಂದ್ರ ಶರಣರು ಒಂದು ಹಳೆಯ ವಿಷಯದ ಬಗ್ಗೆ `ಪ್ರಜಾವಾಣಿ'ಯ `ಸಂಗತ'ದಲ್ಲಿ ಬರೆದಿದ್ದಾರೆ. ಬೃಹನ್ಮಠದ ಮಲ್ಲಿಕಾರ್ಜುನ ಶ್ರೀಗಳವರು ಮಾತುಕತೆಯ ಸಂದರ್ಭದಲ್ಲಿ ಕೈಹಿಡಿದಾಗ ನಾನು ಕೊಸರಿಕೊಂಡೆನು. ಆಗ ಮಲ್ಲಿ ಕಾರ್ಜುನ ಸ್ವಾಮಿಗಳು `ಕೈ ನೋವಾಯಿತೇ? ಚುಚ್ಚಿತೇ?' ಎಂದು ವಿನೋದವಾಗಿ ಪ್ರಶ್ನಿಸಿದ್ದರು.<br /> <br /> ಆಗ ನಾನು ಲಿಂಗಾಯತ ಸ್ವಾಮಿಗಳ ಜೊತೆ ಅಸ್ಪೃಶ್ಯತೆಯಿಂದ ವ್ಯವಹರಿಸಿದ್ದೆನೆಂದೂ ಈಗ ಬಹಳ ಬದಲಾಗಿದ್ದೇನೆಂದೂ ಬರೆದಿದ್ದಾರೆ. ಆದರೆ ಇಂತಹ ಘಟನೆ ಆ ಕಾಲದಲ್ಲಿ ಖಂಡಿತವಾಗಿಯೂ ನಡೆದೇ ಇಲ್ಲ. ಲಿಂಗಾಯತ ಸ್ವಾಮಿಗಳ ಜೊತೆಗಾಗಲೀ ಬೇರೆಯವರ ಜೊತೆಗಾಗಲೀ ನಾನು ಅಸ್ಪೃಶ್ಯತೆಯ ವ್ಯವಹಾರವನ್ನು ಮಾಡಿಯೇ ಇಲ್ಲ.</p>.<p>1954 ರಿಂದಲೂ ಎಲ್ಲಾ ಲಿಂಗಾಯತ ಸ್ವಾಮಿಗಳ ಜೊತೆಗೂ ಸ್ನೇಹ ಸಂಬಂಧವನ್ನು ಬೆಳೆಸಿಕೊಂಡಿದ್ದೇನೆ. ಬ್ರಾಹ್ಮಣ ಮಠಾಧಿಪತಿಗಳಿಗೂ ವೀರಶೈವ ಮಠಾಧಿಪತಿಗಳಿಗೂ ಸ್ನೇಹ ಸಮಾವೇಶವನ್ನು ನಾನೇ ಆರಂಭಿಸಿದ್ದಾಗಿದೆ.<br /> <br /> ಮಠಗಳ ಎಂಡೋಮೆಂಟ್ ವಿವಾದದ ಬಗ್ಗೆ ಮಠಾಧಿಪತಿಗಳ ಸಮಾವೇಶವನ್ನು ದಿವಂಗತ ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ 1978 ರ ಸುಮಾರಿಗೆ ನಡೆದಿದೆ. ಅದಕ್ಕಿಂತಲೂ ಮೊದಲೇ ನಾನು ದಲಿತರ ಕೇರಿಗಳಿಗೆ ಹೋಗಿ ಅಸ್ಪೃಶ್ಯತಾ ನಿವಾರಣೆಯ ಪ್ರಯತ್ನವನ್ನು ಪ್ರಾರಂಭಿಸಿದ್ದೆ.<br /> <br /> ದಲಿತರನ್ನೇ ಅಸ್ಪೃಶ್ಯರಲ್ಲವೆಂದು ಪರಿಗಣಿಸಿ ಅವರ ಕೇರಿ,ಮನೆಗಳಿಗೆ ಹೋಗಿ ಅವರನ್ನು ಸ್ಪರ್ಶಿಸಿದ ನಾನು ಪ್ರತಿಷ್ಠಿತ ಲಿಂಗಾಯತ ಮಠಾಧೀಶರ ಜೊತೆಗೆ ಅಸ್ಪೃಶ್ಯತೆಯಿಂದ ವ್ಯವಹರಿಸಿದ್ದೇನೆಂದು ಕಲ್ಪಿಸಲೂ ಸಾಧ್ಯವಿಲ್ಲ. ವೀರಶೈವ ಮಠಾಧೀಶರನ್ನಾಗಲಿ ಇತರ ಮಠಾಧೀಶರನ್ನಾಗಲಿ ಅಗೌರವಿಸಿಲ್ಲ. ಎಲ್ಲರ ಬಗ್ಗೆಯೂ ನನಗೆ ವಿಶೇಷ ಅಭಿಮಾನವಿದೆ.</p>.<p>ಏನಾದರೂ ತಪ್ಪು ತಿಳಿವಳಿಕೆಯಾಗಿದ್ದಲ್ಲಿ ಅದನ್ನು ಈ ಮೂಲಕ ಸ್ಪಷ್ಟೀಕರಿಸಿ ಸರಿಪಡಿಸುತ್ತಿದ್ದೇನೆ. ಮುರುಘರಾಜೇಂದ್ರ ಶರಣರು ತಮ್ಮ ಲೇಖನದಲ್ಲಿ ನನ್ನ ಬಗ್ಗೆ ತೋರಿದ ಸಹೃದಯತೆ ಮತ್ತು ಅಭಿಮಾನದ ಬಗ್ಗೆ ನನಗೆಸಂತೋಷವಾಗಿದೆ.<br /> <br /> <strong>ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>