ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಣ ತಿಳಿಸಬೇಕಿತ್ತು

Last Updated 23 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಶಿಫಾರಸನ್ನು  ಅನುಸರಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಇತರೆ ಹಿಂದುಳಿದ ಜಾತಿಯವರಿಗೂ (ಒಬಿಸಿ) ಬ್ಯಾಕ್‌ಲಾಗ್‌ ಸೌಲಭ್ಯವನ್ನು ಅನ್ವಯಿಸಿದೆ ಎಂದು ವರದಿ ಮಾಡಲಾಗಿದೆ (ಪ್ರ.ವಾ., ಅ. 6). ವಿಧಾನ ಮಂಡಲದ ಸಮಿತಿ ಈ ಶಿಫಾರಸು ಮಾಡಬೇಕಾಗಿ ಬಂದುದಕ್ಕೆ ಕಾರಣಗಳನ್ನು ತಿಳಿಸಿದ್ದರೆ ಉಪಯುಕ್ತವಾಗುತ್ತಿತ್ತು.

ಹಿಂದುಳಿದ ಜಾತಿಗಳನ್ನು ಐದು ಪ್ರವರ್ಗಗಳಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಯಾವ ಯಾವ ಪ್ರವರ್ಗಕ್ಕೆ ಮೀಸಲಾಗಿಡಲಾಗಿದ್ದ ಯಾವ ಯಾವ ಹುದ್ದೆಗಳಿಗೆ, ನಿಗದಿಯಾಗಿದ್ದ ಅರ್ಹತೆಯುಳ್ಳ ಅಭ್ಯರ್ಥಿಗಳು ಲಭ್ಯವಾಗಿಲ್ಲ ಮತ್ತು ಇಂತಹ ಸಂದರ್ಭ ಎಷ್ಟು ಸಾರಿ ಉದ್ಭವಿಸಿತ್ತು ಎಂಬುದನ್ನು ಸಮಿತಿಯು ಅಧ್ಯಯನ ಮಾಡಿ ಈ ಶಿಫಾರಸು ಮಾಡಿರಬೇಕು.

ನಮ್ಮ ರಾಜ್ಯವು ಈಗ ಒಳಗೊಂಡಿರುವ ಬಹುಪಾಲು ಪ್ರದೇಶಗಳಲ್ಲಿ ತೊಂಬತ್ತು ವರ್ಷಗಳಿಂದ ಒಬಿಸಿಗಳಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಜಾರಿಯಲ್ಲಿದೆ. ಕಳೆದ ಮೂವತ್ತು ವರ್ಷಗಳಿಂದ ನಮ್ಮಲ್ಲಿ ಬಹುಪಾಲು ತಾಲ್ಲೂಕು ಕೇಂದ್ರಗಳಲ್ಲೂ ಉನ್ನತ ಶಿಕ್ಷಣದ ಸೌಲಭ್ಯಗಳು ಲಭ್ಯ ಇವೆ. ಈ ಸೌಲಭ್ಯಗಳನ್ನು ಬಳಸಿಕೊಳ್ಳಲು ಒಬಿಸಿ ವರ್ಗದವರಿಗೆ ಹಾಸ್ಟೆಲ್‌ ಸೌಲಭ್ಯ ಸೇರಿ ಇತರ ಸೌಲಭ್ಯಗಳನ್ನು ಸರ್ಕಾರ ಕೊಟ್ಟಿದೆ. ಹೀಗಿದ್ದರೂ ಅರ್ಹ ಅಭ್ಯರ್ಥಿಗಳು ಏಕೆ ಸಿಗುತ್ತಿಲ್ಲ ಎಂಬುದಕ್ಕೆ ಸಮಿತಿ ಕಾರಣಗಳನ್ನು ಗುರುತಿಸಿ ತಿಳಿಸಬೇಕಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT