ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭವಾಗಿ ಏಳು ವರ್ಷಗಳು ಕಳೆದಿವೆ.
ಇಲ್ಲಿಯವರೆಗೆ ನಿವೇಶನ ಮಂಜೂರು ಆಗಿಲ್ಲ. ಸರ್ಕಾರಿ ಭೂಮಿ ಇದೆ. ಆದರೆ ಕಾಲೇಜು, ಕ್ಷೇತ್ರದ ಜನಪ್ರತಿನಿಧಿಗಳ ರಾಜಕೀಯ ಲಾಲಸೆಗೆ ಬಲಿಯಾಗಿದೆ. ಶಿಕ್ಷಣಕ್ಕೆ ಒತ್ತು ನೀಡಬೇಕೆಂಬ ಬಿ.ಆರ್. ಅಂಬೇಡ್ಕರ್ ಅವರ ತತ್ವವನ್ನು ಅಣಕಿಸುವಂತಿದೆ ಮೀಸಲು ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಆಡಳಿತದ ಧೋರಣೆ.