ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕನಕಗಿರಿ ಕ್ಷೇತ್ರದಿಂದ ಗೆಲುವು ಪಡೆದ ದಲಿತ ಶಾಸಕನ ಮೆರವಣಿಗೆಯನ್ನು ಕಂಡಾಗ ಖುಷಿಯಾಯಿತು.
ಊರಾಚೆ ಕೇರಿಯ ಹುಡುಗನಿಗೆ ಈಗ ರಾಜ ಬೀದಿಯಲ್ಲಿ ಮೆರವಣಿಗೆ. ಮುಟ್ಟಿದರೆ ಮೈಲಿಗೆ ಎನ್ನುತ್ತಿದ್ದವರ ಕೈಗಳಿಂದ ಹಾಲಿನ ಅಭಿಷೇಕ, ಹಬ್ಬ ಹರಿದಿನಗಳಂದು ಹಲಗೆ ಬಡಿದು ಕುಣಿದವರ ಮುಂದೆ ಬ್ಯಾಂಡು– ಭಜಂತ್ರಿ ಮೆರವಣಿಗೆ.
ಹಲಗೆಯ ಶಬ್ದವೇ ತುಂಬಿದ್ದ ಕಿವಿಯೊಳಗೆ ಸನಾದಿಯ ನಿನಾದ. ಮೊದಮೊದಲು ಕೈಕುಲುಕಲು ಹಿಂದೇಟು ಹಾಕುತ್ತಿದ್ದವರಿಂದ ಕೈ ಸಿಹಿ ತುತ್ತು. ಜನರು ಈ ದಲಿತ ಶಾಸಕನಿಗೆ ತಮ್ಮ ಮನದೊಳಗೆ ಜಾಗ ನೀಡಿದ್ದಾರೆ.
ಮೀಸಲಾತಿ ಮನುಷ್ಯರನ್ನು ಒಂದುಗೂಡಿಸುತ್ತದೆಯೇ ವಿನಾ ಅಗಲಿಸುವುದಿಲ್ಲ. ಈ ಮಾತು ಸತ್ಯವೆಂಬುದನ್ನು ದಲಿತ ಶಾಸಕನ ಗೆಲುವಿನಲ್ಲಿ ಕಂಡೆ.