ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಅಂತರಾಳ

Last Updated 20 ಮೇ 2018, 19:30 IST
ಅಕ್ಷರ ಗಾತ್ರ

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕನಕಗಿರಿ ಕ್ಷೇತ್ರದಿಂದ ಗೆಲುವು ಪಡೆದ ದಲಿತ ಶಾಸಕನ ಮೆರವಣಿಗೆಯನ್ನು ಕಂಡಾಗ ಖುಷಿಯಾಯಿತು.

ಊರಾಚೆ ಕೇರಿಯ ಹುಡುಗನಿಗೆ ಈಗ ರಾಜ ಬೀದಿಯಲ್ಲಿ ಮೆರವಣಿಗೆ. ಮುಟ್ಟಿದರೆ ಮೈಲಿಗೆ ಎನ್ನುತ್ತಿದ್ದವರ ಕೈಗಳಿಂದ ಹಾಲಿನ ಅಭಿಷೇಕ, ಹಬ್ಬ ಹರಿದಿನಗಳಂದು ಹಲಗೆ ಬಡಿದು ಕುಣಿದವರ ಮುಂದೆ ಬ್ಯಾಂಡು– ಭಜಂತ್ರಿ ಮೆರವಣಿಗೆ.

ಹಲಗೆಯ ಶಬ್ದವೇ ತುಂಬಿದ್ದ ಕಿವಿಯೊಳಗೆ ಸನಾದಿಯ ನಿನಾದ. ಮೊದಮೊದಲು ಕೈಕುಲುಕಲು ಹಿಂದೇಟು ಹಾಕುತ್ತಿದ್ದವರಿಂದ ಕೈ ಸಿಹಿ ತುತ್ತು. ಜನರು ಈ ದಲಿತ ಶಾಸಕನಿಗೆ ತಮ್ಮ ಮನದೊಳಗೆ ಜಾಗ ನೀಡಿದ್ದಾರೆ.

ಮೀಸಲಾತಿ ಮನುಷ್ಯರನ್ನು ಒಂದುಗೂಡಿಸುತ್ತದೆಯೇ ವಿನಾ ಅಗಲಿಸುವುದಿಲ್ಲ. ಈ ಮಾತು ಸತ್ಯವೆಂಬುದನ್ನು ದಲಿತ ಶಾಸಕನ ಗೆಲುವಿನಲ್ಲಿ ಕಂಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT