ಶನಿ ಶಿಂಗ್ಣಾಪುರ ದೇವಾಲಯವನ್ನು ಮಹಿಳೆಯರು ಪ್ರವೇಶಿಸುವುದು ಅತ್ಯಾಚಾರಕ್ಕೆ ಆಹ್ವಾನಿಸಿದಂತೆ ಎಂಬ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಹೇಳಿಕೆ ಅವೈಜ್ಞಾನಿಕವಾಗಿದೆ.
ದೇವಾಲಯ ಪ್ರವೇಶದಿಂದ ಮಹಿಳೆಯರು ಕೆಡುಕಿಗೆ ತುತ್ತಾಗುತ್ತಾರೆಂಬುದು ಹಾಸ್ಯಾಸ್ಪದ. ಸ್ವಾಮೀಜಿ ಹೇಳಿಕೆಯಿಂದ ದುರ್ಬಲ ಮನಸ್ಸಿನ ಮಹಿಳೆಯರ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು. ಪುರುಷರಂತೆ ಎಲ್ಲ ದೇವಾಲಯಗಳನ್ನೂ ಪ್ರವೇಶಿಸುವುದು ಮಹಿಳೆಯರ ಹಕ್ಕು, ಅದಕ್ಕೆ ಮೌಢ್ಯದ ಬಣ್ಣ ಹಚ್ಚುವುದು ಬೇಡ.