ಕೆಂಗೇರಿ ಉಪನಗರದದಿಂದ 401 ಕೆ, 401 ನಗರ ಸಾರಿಗೆ ವಾಹನಗಳು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದು, ಅಂಬೇಡ್ಕರ್ ಕಾಲೇಜು, ಮೂಡಲಪಾಳ್ಯ, ಗೋವಿಂದರಾಜ ನಗರ, ವಿಜಯನಗರ ಮಾರ್ಗವಾಗಿ ಹೋಗುವ ವಾಹನಗಳು ಗೋವಿಂದರಾಜ ನಗರದಲ್ಲಿನ ಸರ್ವಜ್ಞ ಶಾಲೆ ಪಕ್ಕದ ಜಿ.ಟಿ.ಟಿ.ಇ. ಹಾಸ್ಟೆಲ್ ಮುಂಭಾಗ ನಿಲ್ಲುತ್ತದೆ.
ಈ ಸ್ಥಳದಲ್ಲಿ ಪ್ರಯಾಣಿಕರ ತಂಗುದಾಣ ಇಲ್ಲದೇ ಪ್ರಯಾಣಿಕರು ಬಿಸಿಲು, ಗಾಳಿ, ಮಳೆಯಲ್ಲಿಯೇ ನಿಲ್ಲಬೇಕಿದೆ. ಆದ್ದರಿಂದ ವಿಜಯನಗರದಿಂದ ಉದ್ಯಾನಕ್ಕೆ (ರಹೇಜ ಅಪಾರ್ಟ್ಮೆಂಟ್) ಹೋಗುವ ಜಿ.ಟಿ.ಟಿ.ಇ. ಹಾಸ್ಟೆಲ್ ಮುಂಭಾಗ ಒಂದು ಪ್ರಯಾಣಿಕರ ತಂಗುದಾಣ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ.