ಇಂಥ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿದರೆ ಸಾಲದು, ಪ್ರಕರಣಗಳನ್ನು ಕಾಲಮಿತಿಯೊಳಗೆ ಬಗೆಹರಿಸುವ ವ್ಯವಸ್ಥೆ ಆಗಬೇಕು ಮತ್ತು ವಿಶೇಷ ನ್ಯಾಯಾಲಯದ ತೀರ್ಪೇ ಅಂತಿಮ ಎಂಬಂತಾಗಬೇಕು. ಇಲ್ಲಿ ವಿಚಾರಣೆ ನಡೆಸಿ ತೀರ್ಪು ಘೋಷಿಸಿದ ಬಳಿಕ ಆರೋಪಿಗಳಿಗೆ ಮೇಲ್ಮನವಿಗೆ ಅವಕಾಶ ಕೊಟ್ಟರೆ ವಿಶೇಷ ನ್ಯಾಯಾಲಯ ಸ್ಥಾಪನೆಯ ಉದ್ದೇಶ ಸಫಲವಾಗುವುದಿಲ್ಲ. ಬದಲಿಗೆ, ‘ವಿಶೇಷ ನ್ಯಾಯಾಲಯಗಳನ್ನು ಯಾವ ಪುರುಷಾರ್ಥಕ್ಕೆ ಸ್ಥಾಪಿಸಲಾಯಿತು’ ಎಂದು ಜನರು ಪ್ರಶ್ನಿಸುವಂತಾಗುತ್ತದೆ.