ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿ ಹಾವಳಿ ತಪ್ಪಿಸಿ

Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆ ಬಳಿ ದಾರಿಹೋಕರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ ದೃಶ್ಯಗಳನ್ನು ಸಿ.ಸಿ. ಟಿವಿ ಕ್ಯಾಮೆರಾ ಸೆರೆ ಹಿಡಿದಿದೆ (ಪ್ರ.ವಾ., ಆಗಸ್ಟ್ 17).

ಬೀದಿ ನಾಯಿಗಳ ಹಾವಳಿ ಕೇವಲ ಎಂ.ಎಸ್. ರಾಮಯ್ಯ ಆಸ್ಪತ್ರೆ ಪ್ರದೇಶಕ್ಕೆ ಮಾತ್ರ ಸೀಮಿತವಲ್ಲ. ನಗರದ ಆಯಕಟ್ಟಿನ ಜಾಗಗಳಲ್ಲಿ ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಅಳವಡಿಸಿದರೆ ಇಂಥದೇ ದೃಶ್ಯಗಳನ್ನು ಎಲ್ಲಾ ಕಡೆ ಕಾಣಬಹುದು. ನಗರವಾಸಿಗಳು ಇವುಗಳ ಹಾವಳಿಯನ್ನು ತಮ್ಮ ಕರ್ಮವೋ ಎಂಬಂತೆ ಸಹಿಸುತ್ತಿದ್ದಾರೆ.

ಈ ಕುರಿತು ನಗರಪಾಲಿಕೆ ಅಧಿಕಾರಿಗಳಿಗೆ, ಚುನಾಯಿತ ಸದಸ್ಯರಿಗೆ ಹೇಳಿದರೆ ಕೆಲವರು ‘ಆಯಿತು ನಿವಾರಿಸೋಣ’ ಎಂದರೆ, ಮತ್ತೆ ಕೆಲವರು ಪ್ರಾಣಿ ದಯಾ ಸಂಘದವರತ್ತ ಬೊಟ್ಟು ಮಾಡಿ ಜಾರಿಕೊಳ್ಳುತ್ತಾರೆ. ಜನರ ಪರದಾಟವಂತೂ ಹೆಚ್ಚುತ್ತಲೇ ಇದೆ. ನಗರಪಾಲಿಕೆಯವರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೋ ಅಥವಾ ಪ್ರಾಣಿ ದಯಾ ಸಂಘದವರೇ ಅಡ್ಡಿಪಡಿಸುತ್ತಾರೋ ತಿಳಿಯದಾಗಿದೆ.

ಸಂಬಂಧಪಟ್ಟವರು ಬೀದಿನಾಯಿಗಳ ಹಾವಳಿಯನ್ನು ತಪ್ಪಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಗರದ ಪ್ರವೇಶ ದ್ವಾರಗಳಲ್ಲಿ ‘ನಾಯಿಗಳಿವೆ ಎಚ್ಚರಿಕೆ’ ಎಂಬ ಫಲಕ ಹಾಕಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT