ವಿವಿಧ ಸಂಘಟನೆಗಳ ವ್ಯಾಪಕ ವಿರೋಧದ ನಡುವೆಯೇ ಪಾಕಿಸ್ತಾನದ ಪ್ರಧಾನ ಮಂತ್ರಿ ಅಜ್ಮೀರ್ನ ಪ್ರಸಿದ್ಧ ದರ್ಗಾದ ದರ್ಶನ ಮಾಡಿ ಹೋಗಿದ್ದಾರೆ. ದರ್ಗಾಗೆ ಭೇಟಿ ನೀಡುವ ಅತಿ ಗಣ್ಯರನ್ನು ದರ್ಗಾದ ದಿವಾನ್ರು ಖುದ್ದಾಗಿ ಸ್ವಾಗತಿಸುವ ಸಂಪ್ರದಾಯವನ್ನು ಮುರಿದು ಭಾರತೀಯ ಸೈನಿಕರ ಶಿರಚ್ಛೇದನ ಮಾಡಿದ ಪಾಕ್ ಸೈನ್ಯದ ಅಮಾನವೀಯ ಕೃತ್ಯವನ್ನು ಸೂಕ್ತವಾಗಿ ಪ್ರತಿಭಟಿಸಿದ್ದಾರೆ. ದೇವರ ಸೇವೆಯಲ್ಲಿ ತೊಡಗಿರುವ ದಿವಾನ್ರು ದರ್ಗಾ ದರ್ಶನಕ್ಕೆ ಬಂದ ವಿದೇಶಿ ಭಕ್ತನ ಕಡೆಯಿಂದ ನಮ್ಮ ದೇಶಕ್ಕೆ ಆಗಿರುವ ನೋವಿನ ತೀವ್ರತೆಯನ್ನು ಅನಾವರಣ ಮಾಡಿದ್ದಾರೆ.