<p>ಪಂಪನ ‘ಪಂಪಭಾರತ’ ಮತ್ತು ‘ಆದಿಪುರಾಣ’ ಕಾವ್ಯಗಳು ಮಿಲ್ಟನ್ನನ paradise last and paradise regained ಕಾವ್ಯಗಳಿದ್ದಂತೆ. ಹೀಗೆನ್ನುವ ಡಾ.ಎಲ್. ಬಸವರಾಜು ಅವರು, ಆಂಗ್ಲಭಾಷಿಕರು ಮಿಲ್ಟನ್ನನನ್ನು ಅಧ್ಯಯನಕ್ಕೊಳಪಡಿಸುವಂತೆ, ಮೊದಲ ಹಂತದಲ್ಲಿ ಈ ಎರಡೂ ಕಾವ್ಯಗಳನ್ನು ಪಂಡಿತರಿಗೆ ಉಪಯುಕ್ತವಾಗುವಂತೆ ‘ಮೂಲಪಾಠ ಪರಿಷ್ಕರಣ’ ಮಾಡಿ ಸಂಪಾದಿಸಿಕೊಟ್ಟರು.<br /> <br /> ಎರಡನೇ ಹಂತದಲ್ಲಿ ಈ ಪ್ರಾಚೀನ ಕಾವ್ಯಗಳ ವಾಚನ ಸಂದರ್ಭದಲ್ಲಿ ಸಂಧಿಗಳನ್ನೂ ಸಮಾಸಗಳನ್ನೂ ಬಿಡಿಸಿ ಓದುವುದು, ಶಾಲಾ--–ಕಾಲೇಜು ಅಧ್ಯಾಪಕ ಹಾಗೂ ವಿದ್ಯಾರ್ಥಿಗಳಿಗೆ ಕಷ್ಟವೆಂದು ಪರಿಗಣಿಸಿ, ಅವರಿಗೆ ಉಪಯುಕ್ತವಾಗುವಂತೆ ಸಂಧಿ–ಸಮಾಸಗಳನ್ನು ವಿಂಗಡಿಸಿ, ಪದ್ಯ–ಪಾಠಗಳನ್ನು ಒಡೆದು ‘ಸರಳ ಆದಿಪುರಾಣ’ ಹಾಗೂ ‘ಸರಳ ಪಂಪಭಾರತ’ ಎಂದು ಪ್ರಕಟಿಸಿದರು.<br /> <br /> ಇನ್ನು ಮೂರನೇ ಹಂತದಲ್ಲಿ ಶ್ರೀಸಾಮಾನ್ಯ ಕನ್ನಡಿಗರೂ ಪಂಪನ ಗ್ರಂಥಗಳ ಸೊಗಸನ್ನು ಸುಲಭವಾಗಿ ಗ್ರಹಿಸಲು ಸಾಧ್ಯವಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಈ ಎರಡೂ ಹಳಗನ್ನಡ ಕಾವ್ಯಗಳನ್ನೂ ಹೊಸಗನ್ನಡಕ್ಕೆ ಛಾಯಾನುವಾದ ಮಾಡಿ ‘ಪಂಪನ ಸಮಸ್ತ ಭಾರತ ಕಥಾಮೃತ’ ಮತ್ತು ‘ಪಂಪನ ಆದಿಪುರಾಣ ಕಥಾಮೃತ’ ಗ್ರಂಥಗಳನ್ನು ಪ್ರಕಟಿಸಿ ಕೃತಕೃತ್ಯರಾಗಿದ್ದಾರೆ.<br /> <br /> ಹೀಗೆ ಅವಿರತ ಶ್ರಮ ವಹಿಸಿ ನಾಲ್ಕೈದು ದಶಕಗಳ ಕಾಲ ಪಂಪನೊಂದಿಗೆ ಅನುಸಂಧಾನ ಮಾಡಿದ ಎಲ್.ಬಿ. ಅವರು ಎಲ್ಲಿಯೂ ‘ಪಂಪನನ್ನು ಪಂಡಿತರಿಂದ ಬಿಡುಗಡೆಗೊಳಿಸುವ’ ಅನುಚಿತ ಮಾತಾಡಿಲ್ಲ. ಇದು ವಿದ್ವತ್ತಿಗೆ ತೋರುವ ಗೌರವವೂ ಅಲ್ಲ.<br /> <br /> ಹೀಗಿದ್ದೂ ಪ್ರಸ್ತುತ ಪಂಪನ ‘ವಿಕ್ರಮಾರ್ಜುನ ವಿಜಯದ ತಿಳಿಗನ್ನಡ ಅವತರಣಿಕೆ’ಯನ್ನು ರಚಿಸಿದ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರು ‘ಪಂಪನನ್ನು ಪಂಡಿತರಿಂದ ಬಿಡಿಸದೆ ಹೋದರೆ ಇಡೀ ಸಮಾಜದಿಂದ ಅವನು ತಪ್ಪಿಹೋಗುತ್ತಾನೆ’ ಎನ್ನುವುದು ದಾಷ್ಟ್ಯದ ಮಾತಾದೀತು. ಯಾಕೆಂದರೆ ಈ ನಿಟ್ಟಿನಲ್ಲಿ ಇವರದೂ ಒಂದು ನಮ್ರ ಪ್ರಯತ್ನ ಎಂದರೆ ಉಚಿತವಾದೀತು. ಪಂಪ ಎಂದರೆ ಎಲ್ಲ ಕಾಲಕ್ಕೂ ಎಲ್ಲರಿಗೂ ಸಲ್ಲುವ ಕವಿ.<br /> <br /> <strong>–ಪ್ರೊ. ಶಿವರಾಮಯ್ಯ<br /> ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಂಪನ ‘ಪಂಪಭಾರತ’ ಮತ್ತು ‘ಆದಿಪುರಾಣ’ ಕಾವ್ಯಗಳು ಮಿಲ್ಟನ್ನನ paradise last and paradise regained ಕಾವ್ಯಗಳಿದ್ದಂತೆ. ಹೀಗೆನ್ನುವ ಡಾ.ಎಲ್. ಬಸವರಾಜು ಅವರು, ಆಂಗ್ಲಭಾಷಿಕರು ಮಿಲ್ಟನ್ನನನ್ನು ಅಧ್ಯಯನಕ್ಕೊಳಪಡಿಸುವಂತೆ, ಮೊದಲ ಹಂತದಲ್ಲಿ ಈ ಎರಡೂ ಕಾವ್ಯಗಳನ್ನು ಪಂಡಿತರಿಗೆ ಉಪಯುಕ್ತವಾಗುವಂತೆ ‘ಮೂಲಪಾಠ ಪರಿಷ್ಕರಣ’ ಮಾಡಿ ಸಂಪಾದಿಸಿಕೊಟ್ಟರು.<br /> <br /> ಎರಡನೇ ಹಂತದಲ್ಲಿ ಈ ಪ್ರಾಚೀನ ಕಾವ್ಯಗಳ ವಾಚನ ಸಂದರ್ಭದಲ್ಲಿ ಸಂಧಿಗಳನ್ನೂ ಸಮಾಸಗಳನ್ನೂ ಬಿಡಿಸಿ ಓದುವುದು, ಶಾಲಾ--–ಕಾಲೇಜು ಅಧ್ಯಾಪಕ ಹಾಗೂ ವಿದ್ಯಾರ್ಥಿಗಳಿಗೆ ಕಷ್ಟವೆಂದು ಪರಿಗಣಿಸಿ, ಅವರಿಗೆ ಉಪಯುಕ್ತವಾಗುವಂತೆ ಸಂಧಿ–ಸಮಾಸಗಳನ್ನು ವಿಂಗಡಿಸಿ, ಪದ್ಯ–ಪಾಠಗಳನ್ನು ಒಡೆದು ‘ಸರಳ ಆದಿಪುರಾಣ’ ಹಾಗೂ ‘ಸರಳ ಪಂಪಭಾರತ’ ಎಂದು ಪ್ರಕಟಿಸಿದರು.<br /> <br /> ಇನ್ನು ಮೂರನೇ ಹಂತದಲ್ಲಿ ಶ್ರೀಸಾಮಾನ್ಯ ಕನ್ನಡಿಗರೂ ಪಂಪನ ಗ್ರಂಥಗಳ ಸೊಗಸನ್ನು ಸುಲಭವಾಗಿ ಗ್ರಹಿಸಲು ಸಾಧ್ಯವಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಈ ಎರಡೂ ಹಳಗನ್ನಡ ಕಾವ್ಯಗಳನ್ನೂ ಹೊಸಗನ್ನಡಕ್ಕೆ ಛಾಯಾನುವಾದ ಮಾಡಿ ‘ಪಂಪನ ಸಮಸ್ತ ಭಾರತ ಕಥಾಮೃತ’ ಮತ್ತು ‘ಪಂಪನ ಆದಿಪುರಾಣ ಕಥಾಮೃತ’ ಗ್ರಂಥಗಳನ್ನು ಪ್ರಕಟಿಸಿ ಕೃತಕೃತ್ಯರಾಗಿದ್ದಾರೆ.<br /> <br /> ಹೀಗೆ ಅವಿರತ ಶ್ರಮ ವಹಿಸಿ ನಾಲ್ಕೈದು ದಶಕಗಳ ಕಾಲ ಪಂಪನೊಂದಿಗೆ ಅನುಸಂಧಾನ ಮಾಡಿದ ಎಲ್.ಬಿ. ಅವರು ಎಲ್ಲಿಯೂ ‘ಪಂಪನನ್ನು ಪಂಡಿತರಿಂದ ಬಿಡುಗಡೆಗೊಳಿಸುವ’ ಅನುಚಿತ ಮಾತಾಡಿಲ್ಲ. ಇದು ವಿದ್ವತ್ತಿಗೆ ತೋರುವ ಗೌರವವೂ ಅಲ್ಲ.<br /> <br /> ಹೀಗಿದ್ದೂ ಪ್ರಸ್ತುತ ಪಂಪನ ‘ವಿಕ್ರಮಾರ್ಜುನ ವಿಜಯದ ತಿಳಿಗನ್ನಡ ಅವತರಣಿಕೆ’ಯನ್ನು ರಚಿಸಿದ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರು ‘ಪಂಪನನ್ನು ಪಂಡಿತರಿಂದ ಬಿಡಿಸದೆ ಹೋದರೆ ಇಡೀ ಸಮಾಜದಿಂದ ಅವನು ತಪ್ಪಿಹೋಗುತ್ತಾನೆ’ ಎನ್ನುವುದು ದಾಷ್ಟ್ಯದ ಮಾತಾದೀತು. ಯಾಕೆಂದರೆ ಈ ನಿಟ್ಟಿನಲ್ಲಿ ಇವರದೂ ಒಂದು ನಮ್ರ ಪ್ರಯತ್ನ ಎಂದರೆ ಉಚಿತವಾದೀತು. ಪಂಪ ಎಂದರೆ ಎಲ್ಲ ಕಾಲಕ್ಕೂ ಎಲ್ಲರಿಗೂ ಸಲ್ಲುವ ಕವಿ.<br /> <br /> <strong>–ಪ್ರೊ. ಶಿವರಾಮಯ್ಯ<br /> ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>