<p>ಕಳೆದ ವಾರ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಕುರಿತ ಬಿಸಿ ಬಿಸಿ ಚರ್ಚೆ ನೋಡಿದ್ದೇವೆ. ವಿದೇಶಿ ನೇರ ಬಂಡವಾಳದ ವಿರುದ್ಧ ಮಾತನಾಡಿದವರೂ ಕೊನೆಯಲ್ಲಿ ಹೇಗೆ ಸರ್ಕಾರದ ಪರವಾಗಿ ಮತ ಹಾಕಿದರು ಎಂಬುದನ್ನೂ ಕಂಡಿದ್ದೇವೆ.</p>.<p>ಅದರ ಹಿಂದಿನ ಮರ್ಮ ಏನಿರಬಹುದು ಎಂದೂ ಇಡೀ ದೇಶಕ್ಕೇ ಗೊತ್ತು.ಇದೇ ಗುಂಗಿನಲ್ಲಿದ್ದ ನಾನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ನಾಟಕ ನೋಡಿದೆ.<br /> <br /> ನಾಟಕ `ನಮ್ಮ ರಾಬರ್ಟ್ ಕ್ಲೈವ್'. ಕಥೆ, ಸಂಭಾಷಣೆ ಮತ್ತು ನಿರ್ದೇಶನ ಪ್ರಕಾಶ್ ಬೆಳವಾಡಿಯವರದು. ಅಭಿನಯ `ಸಮುದಾಯ' ತಂಡ. ಕ್ರಿ.ಶ.1600ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಭಾರತಕ್ಕೆ ಪ್ರವೇಶ ಮಾಡಿದ್ದು, ಆ ಸಂದರ್ಭದಲ್ಲಿ ದೇಶದಲ್ಲಿನ ರಾಜರುಗಳು, ನವಾಬರು ಬ್ರಿಟಿಷರ ಆಮಿಷಗಳಿಗೆ ಬಲಿಯಾಗಿ ದೇಶದ ಒಂದೊಂದೇ ಪ್ರದೇಶಗಳನ್ನು ಬಿಟ್ಟುಕೊಡುತ್ತಾ ಕೊನೆಗೆ ಇಡೀ ದೇಶವನ್ನೇ ಒತ್ತೆ ಇಡುವ ದೃಶ್ಯ ಮನಕಲಕುವಂತಿತ್ತು.</p>.<p>ನಾಟಕದುದ್ದಕ್ಕೂ ಬರುವ ಪಾತ್ರಗಳು ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳಲ್ಲಿನ ಪಾತ್ರಗಳನ್ನು ಹೋಲುತ್ತಿದ್ದರೆ ಅದು ಆಕಸ್ಮಿಕವಷ್ಟೆ! ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳದ ಎಲ್ಲಾ ಪ್ರತಿಪಾದಕರೂ ಈ ನಾಟಕವನ್ನು ಅವಶ್ಯವಾಗಿ ನೋಡಲೇಬೇಕು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಳೆದ ವಾರ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಕುರಿತ ಬಿಸಿ ಬಿಸಿ ಚರ್ಚೆ ನೋಡಿದ್ದೇವೆ. ವಿದೇಶಿ ನೇರ ಬಂಡವಾಳದ ವಿರುದ್ಧ ಮಾತನಾಡಿದವರೂ ಕೊನೆಯಲ್ಲಿ ಹೇಗೆ ಸರ್ಕಾರದ ಪರವಾಗಿ ಮತ ಹಾಕಿದರು ಎಂಬುದನ್ನೂ ಕಂಡಿದ್ದೇವೆ.</p>.<p>ಅದರ ಹಿಂದಿನ ಮರ್ಮ ಏನಿರಬಹುದು ಎಂದೂ ಇಡೀ ದೇಶಕ್ಕೇ ಗೊತ್ತು.ಇದೇ ಗುಂಗಿನಲ್ಲಿದ್ದ ನಾನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ನಾಟಕ ನೋಡಿದೆ.<br /> <br /> ನಾಟಕ `ನಮ್ಮ ರಾಬರ್ಟ್ ಕ್ಲೈವ್'. ಕಥೆ, ಸಂಭಾಷಣೆ ಮತ್ತು ನಿರ್ದೇಶನ ಪ್ರಕಾಶ್ ಬೆಳವಾಡಿಯವರದು. ಅಭಿನಯ `ಸಮುದಾಯ' ತಂಡ. ಕ್ರಿ.ಶ.1600ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಭಾರತಕ್ಕೆ ಪ್ರವೇಶ ಮಾಡಿದ್ದು, ಆ ಸಂದರ್ಭದಲ್ಲಿ ದೇಶದಲ್ಲಿನ ರಾಜರುಗಳು, ನವಾಬರು ಬ್ರಿಟಿಷರ ಆಮಿಷಗಳಿಗೆ ಬಲಿಯಾಗಿ ದೇಶದ ಒಂದೊಂದೇ ಪ್ರದೇಶಗಳನ್ನು ಬಿಟ್ಟುಕೊಡುತ್ತಾ ಕೊನೆಗೆ ಇಡೀ ದೇಶವನ್ನೇ ಒತ್ತೆ ಇಡುವ ದೃಶ್ಯ ಮನಕಲಕುವಂತಿತ್ತು.</p>.<p>ನಾಟಕದುದ್ದಕ್ಕೂ ಬರುವ ಪಾತ್ರಗಳು ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳಲ್ಲಿನ ಪಾತ್ರಗಳನ್ನು ಹೋಲುತ್ತಿದ್ದರೆ ಅದು ಆಕಸ್ಮಿಕವಷ್ಟೆ! ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳದ ಎಲ್ಲಾ ಪ್ರತಿಪಾದಕರೂ ಈ ನಾಟಕವನ್ನು ಅವಶ್ಯವಾಗಿ ನೋಡಲೇಬೇಕು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>