ಬಾಲಿಶ ಚರ್ಚೆ ಬೇಡನಮ್ಮ ಜನಪ್ರತಿನಿಧಿಗಳು ಮತ್ತು ನಾಯಕರು ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚಿಸುವ ವಿಷಯಗಳು ಬಹಳ ಬಾಲಿಶವಾಗಿರುತ್ತವೆ. ತಾವು ಯಾಕೆ ಆರಿಸಿ ಬಂದಿದ್ದೇವೆ ಎಂಬ ಪರಿಜ್ಞಾನವಿಲ್ಲದೆ ತಮ್ಮ ಮತ್ತು ಉಳಿದವರ ಖಾಸಗಿ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾ ಕಾಲಹರಣ ಮಾಡುವುದನ್ನು ಮತದಾರ ಪ್ರಶ್ನಿಸಬೇಕಾಗಿದೆ.
ಸರ್ಕಾರಿ ಕಾರ್ಯಕ್ರಮಗಳು ಜನರನ್ನು ಸರಿಯಾಗಿ ತಲಪುತ್ತಿವೆಯೇ, ಇದಕ್ಕಾಗಿ ನಿಯೋಜಿಸಿದ ಹಣ ಸರಿಯಾಗಿ ಉಪಯೋಗ ಆಗಿದೆಯೇ ಎಂಬಂತಹ ಜನಪರ ವಿಷಯಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ.
ಮೋಹನ್ ದಾಸ್ ಶೆಟ್ಟಿ, ಬೆಂಗಳೂರು