<p>ಕರ್ನಾಟಕದಲ್ಲಿ `ರಾಜಕೀಯ ಅನೈತಿಕತೆ' ಪುನರಾರಂಭಗೊಂಡಿದೆ. ಹಿಂದೆ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ `ಆಪರೇಷನ್ ಕಮಲ' ಎಂಬ ನಿರ್ಲಜ್ಜ ಕಾರ್ಯಾಚರಣೆಯನ್ನು ಜಾರಿಗೆ ತರಲಾಯಿತು.</p>.<p>ರಾಜ್ಯದ ಇತಿಹಾಸದಲ್ಲಿ ಮೊದಲಿಗೆ ಇತರೆ ಪಕ್ಷಗಳವರನ್ನು ಆಮಿಷವೊಡ್ಡಿ ಸೆಳೆಯುವ ಅನೈತಿಕ ರಾಜಕೀಯ ಅಧ್ಯಾಯ ಆರಂಭಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಸ್ಥಿರಗೊಳಿಸಲಾಯಿತು. ವಿರೋಧ ಪಕ್ಷಗಳ ಅಸ್ತಿತ್ವಕ್ಕೇ ಆತಂಕ ಎದುರಾಯಿತು.<br /> <br /> ಆಗ ಬೇರೆ ಪಕ್ಷಕ್ಕೆ ಹಾಗೂ ಸ್ಥಾನಮಾನಕ್ಕೆ ರಾಜೀನಾಮೆ ಇತ್ತು ಬಿಜೆಪಿಗೆ ಜಿಗಿದಿದ್ದರು. ಆದರೆ ಈಗ ಅದನ್ನೂ ಮೀರಿಸುವ `ರಾಜಕೀಯ ಅನೈತಿಕತೆ'ಯು ನಿರ್ಲಜ್ಜೆಯಿಂದ ಕಾಣತೊಡಗಿದೆ. ಬಿಜೆಪಿಯಿಂದ ಗೆದ್ದುಬಂದವರು ಯಾವ ನೈತಿಕತೆಯ ಅಂಜಿಕೆಯೂ ಇಲ್ಲದಂತೆ ಬಿ.ಎಸ್.ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷದಲ್ಲಿ ಗುರುತಿಸಿಕೊಳ್ಳಲಾರಂಭಿಸಿದ್ದಾರೆ.<br /> <br /> ಬಿಜೆಪಿಗೆ ಹಾಗೂ ಬಿಜೆಪಿ ಮೂಲಕ ಹೊಂದಿರುವ ಸ್ಥಾನಮಾನಕ್ಕೆ ಮೊದಲು ರಾಜಿನಾಮೆ ಸಲ್ಲಿಸಿ ಆ ನಂತರ ಕೆ.ಜೆ.ಪಿ.ಜೊತೆಗೂಡಿದ್ದರೆ ಅವರ ಧೈರ್ಯವನ್ನು ಜನ ಮೆಚ್ಚುತ್ತಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕರ್ನಾಟಕದಲ್ಲಿ `ರಾಜಕೀಯ ಅನೈತಿಕತೆ' ಪುನರಾರಂಭಗೊಂಡಿದೆ. ಹಿಂದೆ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ `ಆಪರೇಷನ್ ಕಮಲ' ಎಂಬ ನಿರ್ಲಜ್ಜ ಕಾರ್ಯಾಚರಣೆಯನ್ನು ಜಾರಿಗೆ ತರಲಾಯಿತು.</p>.<p>ರಾಜ್ಯದ ಇತಿಹಾಸದಲ್ಲಿ ಮೊದಲಿಗೆ ಇತರೆ ಪಕ್ಷಗಳವರನ್ನು ಆಮಿಷವೊಡ್ಡಿ ಸೆಳೆಯುವ ಅನೈತಿಕ ರಾಜಕೀಯ ಅಧ್ಯಾಯ ಆರಂಭಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಸ್ಥಿರಗೊಳಿಸಲಾಯಿತು. ವಿರೋಧ ಪಕ್ಷಗಳ ಅಸ್ತಿತ್ವಕ್ಕೇ ಆತಂಕ ಎದುರಾಯಿತು.<br /> <br /> ಆಗ ಬೇರೆ ಪಕ್ಷಕ್ಕೆ ಹಾಗೂ ಸ್ಥಾನಮಾನಕ್ಕೆ ರಾಜೀನಾಮೆ ಇತ್ತು ಬಿಜೆಪಿಗೆ ಜಿಗಿದಿದ್ದರು. ಆದರೆ ಈಗ ಅದನ್ನೂ ಮೀರಿಸುವ `ರಾಜಕೀಯ ಅನೈತಿಕತೆ'ಯು ನಿರ್ಲಜ್ಜೆಯಿಂದ ಕಾಣತೊಡಗಿದೆ. ಬಿಜೆಪಿಯಿಂದ ಗೆದ್ದುಬಂದವರು ಯಾವ ನೈತಿಕತೆಯ ಅಂಜಿಕೆಯೂ ಇಲ್ಲದಂತೆ ಬಿ.ಎಸ್.ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷದಲ್ಲಿ ಗುರುತಿಸಿಕೊಳ್ಳಲಾರಂಭಿಸಿದ್ದಾರೆ.<br /> <br /> ಬಿಜೆಪಿಗೆ ಹಾಗೂ ಬಿಜೆಪಿ ಮೂಲಕ ಹೊಂದಿರುವ ಸ್ಥಾನಮಾನಕ್ಕೆ ಮೊದಲು ರಾಜಿನಾಮೆ ಸಲ್ಲಿಸಿ ಆ ನಂತರ ಕೆ.ಜೆ.ಪಿ.ಜೊತೆಗೂಡಿದ್ದರೆ ಅವರ ಧೈರ್ಯವನ್ನು ಜನ ಮೆಚ್ಚುತ್ತಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>