<p>ವಿಚಾರವಾದಿ ನರೇಂದ್ರ ದಾಭೋಲಕರ ಅವರನ್ನು ಪುಣೆಯಲ್ಲಿ ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ. ದೇಶದಲ್ಲಿ ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದ ಬಿ.ಆರ್.ಅಂಬೇಡ್ಕರ್ ಅವರ ತವರು ನೆಲದಲ್ಲಿ ಈಗ ಈ ದುರ್ಘಟನೆ ನಡೆದಿರುವುದು ವಿಪರ್ಯಾಸ.</p>.<p>ಇಷ್ಟಕ್ಕೂ ನರೇಂದ್ರರು ಮಾಡಿದ ತಪ್ಪಾದರೂ ಏನು? ಮೂಲತಃ ವೈದ್ಯರಾಗಿದ್ದ ಅವರು 30 ವರ್ಷಗಳಿಗಿಂತಲೂ ಹಿಂದೆಯೇ ಸಮಾಜಸೇವೆಯತ್ತ ಮುಖ ಮಾಡಿ 1989ರಲ್ಲಿ `ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ'ಯನ್ನು ಆರಂಭಿಸಿ ಮಾಟ, ಮಂತ್ರ, ಡೋಂಗಿ ದೇವಮಾನವರ ವಿರುದ್ಧ ಜನಾಂದೋಲನ ಆರಂಭಿಸಿ, ಅದರಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡವರು. 3000ಕ್ಕೂ ಹೆಚ್ಚು ಸಾರ್ವಜನಿಕ ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಮೂಢನಂಬಿಕೆಗಳ ವಿರುದ್ಧ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.<br /> <br /> ಪುಣೆಯಲ್ಲಿ ನಡೆದ ವಿಚಾರವಾದಿ ಸಮ್ಮೇಳನವೊಂದರಲ್ಲಿ ಭಾಗವಹಿಸಿದ್ದಾಗ ಅವರಲ್ಲಿ ಕಂಡದ್ದು ಒಬ್ಬ ನೈಜ ವಿಚಾರವಾದಿಯ ಅಪ್ರತಿಮ ಸರಳತೆ ಹಾಗೂ ವಿನಯಶೀಲತೆಯನ್ನು. ಅಂದು ನರೇಂದ್ರರು ಹೇಳಿದ್ದು- `ಜನರ ಅಜ್ಞಾನವನ್ನು ಬಂಡವಾಳವಾಗಿಸಿಕೊಂಡು, ಅವರನ್ನು ಶೋಷಿಸುವ ರಕ್ಕಸರಾಗಬೇಡಿ, ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಮನುಷ್ಯರಾಗಿ ಬದುಕಿ'.</p>.<p>ಇದು ನಮ್ಮ ದೇಶದ ಸಂವಿಧಾನದ ಆಶಯ ಕೂಡ. ಹಾಗಾದರೆ ಸಂವಿಧಾನದ ಆಶಯಗಳ ಅನುಷ್ಠಾನಕ್ಕಾಗಿ ದನಿ ಎತ್ತುವುದೂ ಅಪರಾಧವೇ? ವೈಚಾರಿಕ ಚಳವಳಿಯಲ್ಲಿ ತೊಡಗಿಸಿಕೊಂಡವರಿಗೆ ಈಗಲಾದರೂ ಸೂಕ್ತ ರಕ್ಷಣೆ ದೊರೆಯಲಿ.<br /> <strong>-ಡಾ.ಸಿದ್ದರಾಜು, ಕೊತ್ತತ್ತಿ, ಮಂಡ್ಯ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಚಾರವಾದಿ ನರೇಂದ್ರ ದಾಭೋಲಕರ ಅವರನ್ನು ಪುಣೆಯಲ್ಲಿ ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ. ದೇಶದಲ್ಲಿ ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದ ಬಿ.ಆರ್.ಅಂಬೇಡ್ಕರ್ ಅವರ ತವರು ನೆಲದಲ್ಲಿ ಈಗ ಈ ದುರ್ಘಟನೆ ನಡೆದಿರುವುದು ವಿಪರ್ಯಾಸ.</p>.<p>ಇಷ್ಟಕ್ಕೂ ನರೇಂದ್ರರು ಮಾಡಿದ ತಪ್ಪಾದರೂ ಏನು? ಮೂಲತಃ ವೈದ್ಯರಾಗಿದ್ದ ಅವರು 30 ವರ್ಷಗಳಿಗಿಂತಲೂ ಹಿಂದೆಯೇ ಸಮಾಜಸೇವೆಯತ್ತ ಮುಖ ಮಾಡಿ 1989ರಲ್ಲಿ `ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ'ಯನ್ನು ಆರಂಭಿಸಿ ಮಾಟ, ಮಂತ್ರ, ಡೋಂಗಿ ದೇವಮಾನವರ ವಿರುದ್ಧ ಜನಾಂದೋಲನ ಆರಂಭಿಸಿ, ಅದರಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡವರು. 3000ಕ್ಕೂ ಹೆಚ್ಚು ಸಾರ್ವಜನಿಕ ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಮೂಢನಂಬಿಕೆಗಳ ವಿರುದ್ಧ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.<br /> <br /> ಪುಣೆಯಲ್ಲಿ ನಡೆದ ವಿಚಾರವಾದಿ ಸಮ್ಮೇಳನವೊಂದರಲ್ಲಿ ಭಾಗವಹಿಸಿದ್ದಾಗ ಅವರಲ್ಲಿ ಕಂಡದ್ದು ಒಬ್ಬ ನೈಜ ವಿಚಾರವಾದಿಯ ಅಪ್ರತಿಮ ಸರಳತೆ ಹಾಗೂ ವಿನಯಶೀಲತೆಯನ್ನು. ಅಂದು ನರೇಂದ್ರರು ಹೇಳಿದ್ದು- `ಜನರ ಅಜ್ಞಾನವನ್ನು ಬಂಡವಾಳವಾಗಿಸಿಕೊಂಡು, ಅವರನ್ನು ಶೋಷಿಸುವ ರಕ್ಕಸರಾಗಬೇಡಿ, ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಮನುಷ್ಯರಾಗಿ ಬದುಕಿ'.</p>.<p>ಇದು ನಮ್ಮ ದೇಶದ ಸಂವಿಧಾನದ ಆಶಯ ಕೂಡ. ಹಾಗಾದರೆ ಸಂವಿಧಾನದ ಆಶಯಗಳ ಅನುಷ್ಠಾನಕ್ಕಾಗಿ ದನಿ ಎತ್ತುವುದೂ ಅಪರಾಧವೇ? ವೈಚಾರಿಕ ಚಳವಳಿಯಲ್ಲಿ ತೊಡಗಿಸಿಕೊಂಡವರಿಗೆ ಈಗಲಾದರೂ ಸೂಕ್ತ ರಕ್ಷಣೆ ದೊರೆಯಲಿ.<br /> <strong>-ಡಾ.ಸಿದ್ದರಾಜು, ಕೊತ್ತತ್ತಿ, ಮಂಡ್ಯ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>