ಚುನಾವಣಾ ಕಣದಲ್ಲಿರುವವರು ಯಾರೂ ಬಡವರಲ್ಲ, ನಿರ್ಗತಿಕರಲ್ಲ. ಹಣ ಹಾಕಿ ಹಣ ಮಾಡಲು ಹಂಬಲಿಸುವವರು. ಒಟ್ಟಾರೆ ಇಂದು ಲಾಭದಾಯಕ ದಂಧೆ ಎಂದರೆ ರಾಜಕೀಯ ಮಾತ್ರ! ಕುಟುಂಬ ಉದ್ಧಾರಕ್ಕೆ ತಾರಕಮಂತ್ರ. ಒಂದು ದಿನ ಮತ ಹಾಕಿ ಐದು ವರ್ಷ ಮಾಲೆ ಹಾಕುತ್ತ ಮರ್ಜಿ ಹಿಡಿದು ಸಾಯುವುದು ಪ್ರಜೆಯ ಹಣೆಬರಹ. ಪ್ರಜೆ 50 ಸಾವಿರ ಸಾಲಕ್ಕಾಗಿ ಆತ್ಮಹತ್ಯೆ ಮಾಡಿಕೊಂಡರೆ, ತಿಂಗಳಿಗೆ 5 ಲಕ್ಷ ಪಡೆಯುವ ‘ಸೇವಕರು’ ನಮ್ಮಲ್ಲಿದ್ದಾರೆ. ಇದು ಸಂಬಳದ ನೌಕರರ ಸಂಭ್ರಮ ಹಾಗೂ ಸರ್ವಾಧಿಕಾರ. ಸೇವಕರಿಗೆ ಇರುವ ಅನುಕೂಲತೆ, ಆರ್ಥಿಕ ಭದ್ರತೆ ಮಾಲೀಕನಿಗಿಲ್ಲ. ಅದಕ್ಕಾಗಿಯೇ ಟಿಕೆಟ್ಗಾಗಿ ಹೊಡೆದಾಡಿ ಸಾಯುತ್ತಿದ್ದಾರೆ.