<p>ಉತ್ತರ ಪ್ರದೇಶದಲ್ಲಿ ಅಸ್ವಸ್ಥ ಮಗನನ್ನು ಹೆಗಲ ಮೇಲೆ ಹೊತ್ತು ಓಡಾಡಿದ ಅಪ್ಪ, ಒಡಿಶಾದಲ್ಲಿ ಪತ್ನಿಯ ಶವವನ್ನು ಹೊತ್ತುಕೊಂಡು ಹೋದ ಪತಿ, ವೃದ್ಧೆಯ ಶವದ ಕೈ ಕಾಲು ಮುರಿದು ಚೀಲದಲ್ಲಿ ಕಟ್ಟಿ ಹೊತ್ತೊಯ್ದದ್ದು ಈ ಎಲ್ಲವನ್ನೂ ನೊಡಿದರೆ ನಮ್ಮನ್ನಾಳುವ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಸ್ವಲ್ಪವಾದರೂ ಮರುಕ ಹುಟ್ಟುವುದಿಲ್ಲವೇ ಎನಿಸುತ್ತದೆ.<br /> <br /> ಬಡವರಿಗೆ ತುರ್ತು ಚಿಕಿತ್ಸಾ ವಾಹನ ಮತ್ತು ಶವಸಾಗಣೆ ವಾಹನಗಳನ್ನು ಒದಗಿಸಬೇಕಾದುದು ಸರ್ಕಾರದ ಕರ್ತವ್ಯವಲ್ಲವೇ?<br /> <br /> ಬೆಂಗಳೂರಿನ ‘ನಿಮ್ಹಾನ್ಸ್’ ಆಸ್ಪತ್ರೆಯ ಬಳಿ ತುರ್ತು ಚಿಕಿತ್ಸಾ ವಾಹನದ ದಂಧೆಯೇ ನಡೆಯುತ್ತದೆ. ಈ ವಾಹನಗಳನ್ನು ಬಳಸಲು ಅವರು ಹೇಳಿದಷ್ಟು ಬೆಲೆ ಕೊಡಲೇಬೇಕು.<br /> <br /> ಅಲ್ಲದೆ ನಿಯಂತ್ರಣ ಸಾಧಿಸಿದವರ ಅನುಮತಿ ಇಲ್ಲದೆ ಬೇರೆ ಯಾವುದೇ ತುರ್ತು ಚಿಕಿತ್ಸಾ ವಾಹನ ಅಲ್ಲಿ ಪ್ರವೇಶಿಸುವಂತಿಲ್ಲ.<br /> <br /> ರೋಗಿಗಳನ್ನು ಸ್ಥಳಾಂತರಿಸುವುದಿರಲಿ ಅಥವಾ ಶವ ಸಾಗಣೆಯೇ ಇರಲಿ ಇಲ್ಲಿ ಕರುಣೆಗೆ ಜಾಗವೇ ಇಲ್ಲ. ಆದರೂ ಕಾನೂನು ವ್ಯವಸ್ಥೆ ಕಣ್ಮುಚ್ಚಿ ಕುಳಿತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉತ್ತರ ಪ್ರದೇಶದಲ್ಲಿ ಅಸ್ವಸ್ಥ ಮಗನನ್ನು ಹೆಗಲ ಮೇಲೆ ಹೊತ್ತು ಓಡಾಡಿದ ಅಪ್ಪ, ಒಡಿಶಾದಲ್ಲಿ ಪತ್ನಿಯ ಶವವನ್ನು ಹೊತ್ತುಕೊಂಡು ಹೋದ ಪತಿ, ವೃದ್ಧೆಯ ಶವದ ಕೈ ಕಾಲು ಮುರಿದು ಚೀಲದಲ್ಲಿ ಕಟ್ಟಿ ಹೊತ್ತೊಯ್ದದ್ದು ಈ ಎಲ್ಲವನ್ನೂ ನೊಡಿದರೆ ನಮ್ಮನ್ನಾಳುವ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಸ್ವಲ್ಪವಾದರೂ ಮರುಕ ಹುಟ್ಟುವುದಿಲ್ಲವೇ ಎನಿಸುತ್ತದೆ.<br /> <br /> ಬಡವರಿಗೆ ತುರ್ತು ಚಿಕಿತ್ಸಾ ವಾಹನ ಮತ್ತು ಶವಸಾಗಣೆ ವಾಹನಗಳನ್ನು ಒದಗಿಸಬೇಕಾದುದು ಸರ್ಕಾರದ ಕರ್ತವ್ಯವಲ್ಲವೇ?<br /> <br /> ಬೆಂಗಳೂರಿನ ‘ನಿಮ್ಹಾನ್ಸ್’ ಆಸ್ಪತ್ರೆಯ ಬಳಿ ತುರ್ತು ಚಿಕಿತ್ಸಾ ವಾಹನದ ದಂಧೆಯೇ ನಡೆಯುತ್ತದೆ. ಈ ವಾಹನಗಳನ್ನು ಬಳಸಲು ಅವರು ಹೇಳಿದಷ್ಟು ಬೆಲೆ ಕೊಡಲೇಬೇಕು.<br /> <br /> ಅಲ್ಲದೆ ನಿಯಂತ್ರಣ ಸಾಧಿಸಿದವರ ಅನುಮತಿ ಇಲ್ಲದೆ ಬೇರೆ ಯಾವುದೇ ತುರ್ತು ಚಿಕಿತ್ಸಾ ವಾಹನ ಅಲ್ಲಿ ಪ್ರವೇಶಿಸುವಂತಿಲ್ಲ.<br /> <br /> ರೋಗಿಗಳನ್ನು ಸ್ಥಳಾಂತರಿಸುವುದಿರಲಿ ಅಥವಾ ಶವ ಸಾಗಣೆಯೇ ಇರಲಿ ಇಲ್ಲಿ ಕರುಣೆಗೆ ಜಾಗವೇ ಇಲ್ಲ. ಆದರೂ ಕಾನೂನು ವ್ಯವಸ್ಥೆ ಕಣ್ಮುಚ್ಚಿ ಕುಳಿತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>