<p>ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ದೈತ್ಯ ಬಹುರಾಷ್ಟ್ರೀಯ ವ್ಯಾಪಾರೀ ಸಂಸ್ಥೆಗಳು ನುಗ್ಗಿದರೆ ಉಂಟಾಗುವ ಪರಿಣಾಮಗಳ ಬಗ್ಗೆ ಬೇರೆ ಬೇರೆ ದೇಶಗಳ ಅನುಭವವೇ ಸಾರಿ ಹೇಳುತ್ತವೆ. <br /> <br /> ಲ್ಯಾಟಿನ್ ಅಮೆರಿಕಾ, ರಷ್ಯಾ, ಥೈಲ್ಯಾಂಡ್, ಮಲೇಶಿಯಾ, ಇಂಡೋನೇಶಿಯ ಮುಂತಾದ ದೇಶಗಳಲ್ಲಿ ದೈತ್ಯ ಬಹುರಾಷ್ಟ್ರೀಯ ಕಂಪನಿಗಳಾದ ವಾಲ್ಮಾರ್ಟ್, ಟ್ರೆಸೊ, ಕರೆಫೋರ್, ಮೆಟ್ರೊಗಳ ಪ್ರವೇಶಗಳಿಂದಾಗಿ ದೊಡ್ಡ ಸಂಖ್ಯೆಯ ಪಾರಂಪರಿಕ ಅಂಗಡಿಗಳು ಮುಚ್ಚಿ ಲಕ್ಷಾಂತರ ಜನ ಬೀದಿ ಪಾಲಾಗಿದ್ದಾರೆ. <br /> <br /> ತಮ್ಮ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಸಿಗದೇ ಅಲ್ಲಿಯ ರೈತಾಪಿ ಜನಗಳೂ ಕಂಗಾಲಾಗಿದ್ದಾರೆ. ಗ್ರಾಹಕರ ಅನುಭವ ವಿಭಿನ್ನವೇನಲ್ಲ. ಅದ್ದರಿಂದ ಯಾವುದೇ ದಿಕ್ಕಿನಿಂದ ನೋಡಿದರೂ ಈ ವಿದೇಶಿ ದೈತ್ಯ ಕಂಪನಿಗಳ ಪ್ರವೇಶ ಯಾರಿಗೂ ಅನುಕೂಲ ಮಾಡಲು ಸಾಧ್ಯವಿಲ್ಲ. <br /> <br /> ಮುಂದುವರಿದ ದೇಶಗಳಲ್ಲಿ ಈಗಾಗಲೇ ವ್ಯಾಪಾರದಲ್ಲಿ ಕುಸಿತ ಕಂಡ ಈ ದೈತ್ಯ ಕಂಪನಿಗಳು ತಮ್ಮ ಲಾಭಕ್ಕಾಗಿ ನಮ್ಮಂಥ ಹಸಿರು ಹುಲ್ಲುಗಾವಲು ದೇಶಗಳತ್ತ ಮುಖ ಮಾಡಿವೆ. ನಮ್ಮ ಸರ್ಕಾರಗಳ ಕೈ ತಿರುಚಿ ಒತ್ತಡ ಹೇರುತ್ತಿವೆ ಕೂಡ. <br /> <br /> ನಮ್ಮ ಪ್ರಧಾನ ಮಂತ್ರಿಗಳಿಗೆ ಭಾರತೀಯ ಪ್ರಜೆಗಳ ಬದುಕಿಗಿಂತ ವಿದೇಶಿ ಅದರಲ್ಲೂ ಅಮೆರಿಕಾದ ದೊಡ್ಡಣ್ಣನ ಮಾತೇ ವೇದವಾಕ್ಯ. ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ಜನರ ಜೀವ ಹಿಂಡುವ ಅದೇ ನೀತಿಗಳನ್ನು ಸರ್ಕಾರ ಮುಂದುವರಿಸುತ್ತಿದ್ದರೆ `ಪ್ರಜಾವಾಣಿ~ ಸರ್ಕಾರದ ಕಿವಿ ಹಿಂಡಿ ಬುದ್ಧಿ ಹೇಳಬೇಕೆಂದು ನಾವು ಬಯಸುತ್ತೇವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ದೈತ್ಯ ಬಹುರಾಷ್ಟ್ರೀಯ ವ್ಯಾಪಾರೀ ಸಂಸ್ಥೆಗಳು ನುಗ್ಗಿದರೆ ಉಂಟಾಗುವ ಪರಿಣಾಮಗಳ ಬಗ್ಗೆ ಬೇರೆ ಬೇರೆ ದೇಶಗಳ ಅನುಭವವೇ ಸಾರಿ ಹೇಳುತ್ತವೆ. <br /> <br /> ಲ್ಯಾಟಿನ್ ಅಮೆರಿಕಾ, ರಷ್ಯಾ, ಥೈಲ್ಯಾಂಡ್, ಮಲೇಶಿಯಾ, ಇಂಡೋನೇಶಿಯ ಮುಂತಾದ ದೇಶಗಳಲ್ಲಿ ದೈತ್ಯ ಬಹುರಾಷ್ಟ್ರೀಯ ಕಂಪನಿಗಳಾದ ವಾಲ್ಮಾರ್ಟ್, ಟ್ರೆಸೊ, ಕರೆಫೋರ್, ಮೆಟ್ರೊಗಳ ಪ್ರವೇಶಗಳಿಂದಾಗಿ ದೊಡ್ಡ ಸಂಖ್ಯೆಯ ಪಾರಂಪರಿಕ ಅಂಗಡಿಗಳು ಮುಚ್ಚಿ ಲಕ್ಷಾಂತರ ಜನ ಬೀದಿ ಪಾಲಾಗಿದ್ದಾರೆ. <br /> <br /> ತಮ್ಮ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಸಿಗದೇ ಅಲ್ಲಿಯ ರೈತಾಪಿ ಜನಗಳೂ ಕಂಗಾಲಾಗಿದ್ದಾರೆ. ಗ್ರಾಹಕರ ಅನುಭವ ವಿಭಿನ್ನವೇನಲ್ಲ. ಅದ್ದರಿಂದ ಯಾವುದೇ ದಿಕ್ಕಿನಿಂದ ನೋಡಿದರೂ ಈ ವಿದೇಶಿ ದೈತ್ಯ ಕಂಪನಿಗಳ ಪ್ರವೇಶ ಯಾರಿಗೂ ಅನುಕೂಲ ಮಾಡಲು ಸಾಧ್ಯವಿಲ್ಲ. <br /> <br /> ಮುಂದುವರಿದ ದೇಶಗಳಲ್ಲಿ ಈಗಾಗಲೇ ವ್ಯಾಪಾರದಲ್ಲಿ ಕುಸಿತ ಕಂಡ ಈ ದೈತ್ಯ ಕಂಪನಿಗಳು ತಮ್ಮ ಲಾಭಕ್ಕಾಗಿ ನಮ್ಮಂಥ ಹಸಿರು ಹುಲ್ಲುಗಾವಲು ದೇಶಗಳತ್ತ ಮುಖ ಮಾಡಿವೆ. ನಮ್ಮ ಸರ್ಕಾರಗಳ ಕೈ ತಿರುಚಿ ಒತ್ತಡ ಹೇರುತ್ತಿವೆ ಕೂಡ. <br /> <br /> ನಮ್ಮ ಪ್ರಧಾನ ಮಂತ್ರಿಗಳಿಗೆ ಭಾರತೀಯ ಪ್ರಜೆಗಳ ಬದುಕಿಗಿಂತ ವಿದೇಶಿ ಅದರಲ್ಲೂ ಅಮೆರಿಕಾದ ದೊಡ್ಡಣ್ಣನ ಮಾತೇ ವೇದವಾಕ್ಯ. ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ಜನರ ಜೀವ ಹಿಂಡುವ ಅದೇ ನೀತಿಗಳನ್ನು ಸರ್ಕಾರ ಮುಂದುವರಿಸುತ್ತಿದ್ದರೆ `ಪ್ರಜಾವಾಣಿ~ ಸರ್ಕಾರದ ಕಿವಿ ಹಿಂಡಿ ಬುದ್ಧಿ ಹೇಳಬೇಕೆಂದು ನಾವು ಬಯಸುತ್ತೇವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>