‘ಮಧುಗಿರಿ ಬೆಟ್ಟಕ್ಕೆ ಬರಲಿದೆ ಕೇಬಲ್ ಕಾರ್!’ (ಪ್ರ.ವಾ., ಮೇ 17) ಎಂಬ ಸುದ್ದಿ ಗಮನಸೆಳೆಯಿತು. ಮಧುಗಿರಿ, ನಂದಿಬೆಟ್ಟ ಮತ್ತು ಯಾದಗಿರಿ ಬೆಟ್ಟಗಳಲ್ಲಿ ಪ್ರವಾಸೋದ್ಯಮ ಇಲಾಖೆಯು ಇನ್ನೆರಡು ವರ್ಷಗಳಲ್ಲಿ ಕೇಬಲ್ ಕಾರ್ಗಳ ವ್ಯವಸ್ಥೆ ಮಾಡಲಿದ್ದು, ಇವು ಪ್ರವಾಸಿಗರನ್ನು ಆಕರ್ಷಿಸಲಿವೆ ಎಂಬುದು ಸುದ್ದಿಯ ಸಾರಾಂಶ. ಇದು ಸಂತಸದ ವಿಚಾರ.
ಆದರೆ, ಈ ಸುದ್ದಿ ಓದಿದೊಡನೆ ನೆನಪಿಗೆ ಬಂದಿದ್ದು ಶಿವಗಂಗೆ ಬೆಟ್ಟ. ನೆಲಮಂಗಲ ತಾಲ್ಲೂಕಿಗೆ ಸೇರಿರುವ ಹಾಗೂ ತುಮಕೂರು ಜಿಲ್ಲೆಗೆ ಹೊಂದಿಕೊಂಡಂತಿರುವ ಶಿವಗಂಗೆ ಬೆಟ್ಟವು ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧವಾಗಿದೆ. ಇಲ್ಲಿನ ಬೆಟ್ಟ ಹತ್ತಿ, ತುತ್ತ ತುದಿ ತಲುಪಿ ನಂದಿಯನ್ನೊಂದು ಸುತ್ತು ಹಾಕಿ ಬರುವುದೇ ಅದ್ಭುತ ಅನುಭವ.